Advertisement

ಶಾಲೆ, ಕಾಲೇಜುಗಳಲ್ಲಿ ಗಣೇಶೋತ್ಸವ ಚರ್ಚೆ: ಯಡಿಯೂರಪ್ಪ ಆಕ್ಷೇಪ

10:01 PM Aug 19, 2022 | Team Udayavani |

ಬೆಂಗಳೂರು: ಶಾಲೆ, ಕಾಲೇಜುಗಳಲ್ಲಿ ಗಣೇಶೋತ್ಸವದ ಕುರಿತು ಚರ್ಚೆ ನಡೆಸುವುದು ಅನಗತ್ಯ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

Advertisement

ಶುಕ್ರವಾರ ತಿರುಪತಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ ಅವರೊಂದಿಗೆ ಪ್ರಸಕ್ತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಅನೌಪಚಾರಿಕ ಚರ್ಚೆ ನಡೆಸಿ, ಪಕ್ಷ ಹಾಗೂ ಸರಕಾರದಲ್ಲಿ ಆಡಳಿತ ಬಿಗಿ ಮಾಡಬೇಕು. ಸಚಿವರು ಮಾಧ್ಯಮದ ಮುಂದೆ ಮನ ಬಂದಂತೆ ಮಾತಾಡುವುದನ್ನು ನಿಲ್ಲಿಸಬೇಕು. ಶಾಲೆಗಳಲ್ಲಿ ಗಣೇಶೋತ್ಸವ ವಿಚಾರ ಈಗ ಯಾಕೆ ಮಾತನಾಡಬೇಕು? ಹಿಂದೆ ಹೇಗೆ ಇದೆಯೋ ಅದನ್ನು ಮುಂದುವರಿಸಿಕೊಂಡು ಹೋಗುವುದು ಬಿಟ್ಟು ಹೊಸದಾಗಿ ಹೇಳುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಮಧ್ಯೆ, ಮೊಟ್ಟೆ ಎಸೆತ ಪ್ರಕರಣದ ಬಗ್ಗೆಯೂ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದು, ಧಿಕ್ಕಾರ ಕೂಗುವುದು ಎಲ್ಲರ ಹಕ್ಕು. ಆದರೆ ಈ ರೀತಿ ಮೊಟ್ಟೆ ಎಸೆಯುವುದು, ಹÇÉೆ ಮಾಡುವುದು ಸರಿಯಲ್ಲ. ಮೊಟ್ಟೆ ಎಸೆದು ನಮ್ಮವರು ತಪ್ಪು ಮಾಡುತ್ತಿದ್ದಾರೆ. ಈ ರೀತಿಯ ಬೆಳವಣಿಗೆಗಳು ಪಕ್ಷ ಮತ್ತು ಸರಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದರು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next