Advertisement
ನಗರಕ್ಕೆ ಪ್ರತಿವರ್ಷ ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ನವರಾತ್ರಿ, ದೀಪಾವಳಿ, ಪರ್ಯಾಯ ಪ್ರಯುಕ್ತ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಹೂವಿನ ವ್ಯಾಪಾರಿಗಳು ಆಗಮಿಸುತ್ತಾರೆ. ವ್ಯಾಪಾರದಲ್ಲಿ ಉತ್ತಮ ಲಾಭಗಳಿಸಿ ನಗು ಮುಖದಿಂದ ಹಿಂದಿರುಗಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ ವ್ಯಾಪಾರಿಗಳು ಬರಿ ಗೈಯಲ್ಲಿ ಹಿಂದಿರುಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದಲ್ಲಿ ಇದೇ ಮೊದಲ ಬಾರಿ ಹೂವಿನ ಮಾರಾಟ ಕುಂಠಿತವಾಗಿದೆ. ಮಳೆ ಯಿಂದಾಗಿ ಜನರು ಬೀದಿಗೆ ಬಂದು ಹೂವುಗಳನ್ನು ಖರೀದಿಸಲು
ಹಿಂದೇಟು ಹಾಕುತ್ತಿದ್ದಾರೆ. ತುಂತುರು ಮಳೆಯಿಂದಾಗಿ ಹೂವಿನ ಬಣ್ಣ ಹಾಳಾಗುತ್ತಿದೆ. ಸಂಕಷ್ಟದಲ್ಲೂ “ಚೌಕಾಶಿ’
ನಗರದ ವಿವಿಧ ರಸ್ತೆಗಳ ಪಾದಚಾರಿ ಮಾರ್ಗದಲ್ಲಿ ಹೂವು ಹರಡಿ
ಕೊಂಡಿರುವ ಮಾರಾಟಗಾರರು ಮಳೆಯಿಂದ ಹೂವು ರಕ್ಷಿಸಿಕೊಳ್ಳಲು ಟೆಂಟ್ ಹಾಕಿಕೊಂಡಿದ್ದಾರೆ.
Related Articles
Advertisement
ಲಾಭಕ್ಕಿಂತ ನಷ್ಟವೇ ಅಧಿಕ!ಕಳೆದ 8ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವ್ಯಾಪಾರ ಕುಂಠಿತವಾಗಿದೆ. ಮಳೆ
ಯಿಂದಾಗಿ ಜನರು ಹೂವಿನ ಖರೀದಿಗೆ ಮುಂದೆ ಬರುತ್ತಿಲ್ಲ. ಸಾವಿರಾರು ರೂ. ವ್ಯಯಿಸಿ ಖರೀದಿ ಮಾಡಿದ ಹೂ ಮಾರಾಟವಾಗದೆ ಹಾಗೇ ಉಳಿದುಕೊಂಡಿದೆ. ಸೋಮವಾರ ಬೆಳಗ್ಗೆ 12 ಗಂಟೆಯ ಒಳಗೆ ಮಾರಾಟವಾಗದೆ ಹೋದರೆ ಹೂವಿನ ನಷ್ಟ ಕೈಯಿಂದ ಭರಿಸಬೇಕಾಗುತ್ತದೆ.
– ಶಿವನ ಗೌಡ, ಚಿಕ್ಕಮಗಳೂರು ವ್ಯಾಪಾರಿ