Advertisement

ಸಹ ನಿರ್ದೇಶಕರ ಸಹಾಯಕ್ಕೆ ಬಂದ ಗಣೇಶ್‌

11:08 AM Apr 09, 2020 | Suhan S |

ಕೋವಿಡ್ 19 ಎಫೆಕ್ಟ್ ನಿಂದ ಎಲ್ಲೆಡೆ ಪರಿಸ್ಥಿತಿ ಹದಗೆಟ್ಟಿದೆ. ಕಾರ್ಮಿಕರು, ದಿನಗೂಲಿಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿತ್ರರಂಗದಲ್ಲಿರುವ ಹಲವು ವಿಭಾಗಗಳಲ್ಲಿ ದುಡಿಯುತ್ತಿರುವ ತಂತ್ರಜ್ಞರು ಕೂಡ ಸಮಸ್ಯೆಗೆ ಸಿಲುಕಿದ್ದಾರೆ. ಈಗಾಗಲೆ ಕಳೆದ ಒಂದು ವಾರದಿಂದಲೂ ನಟ ಗಣೇಶ್‌ ಅವರು ಬಡವರನ್ನು ಗುರುತಿಸಿ, ತಮ್ಮ ಅಭಿಮಾನಿ ಸಂಘದ ಪದಾಧಿಕಾರಿಗಳ ಮೂಲಕ ದಿನಸಿ ವಿತರಿಸುವ ಮೂಲಕ ಅವರ ಕಷ್ಟಕ್ಕೆ ನೆರವಾಗಿದ್ದರು. ಈಗ ನಿರ್ದೇಶಕರ ಸಂಘದ ಸಹಾಯಕ ನಿರ್ದೇಶಕರು, ಸಹ ನಿರ್ದೇಶಕರ ನೆರವಿಗೆ ಧಾವಿಸಿದ್ದಾರೆ.

Advertisement

ಅವರ ಈ ಸಹಾಯ ಕಾರ್ಯಕ್ಕೆ ಮೂಡಲಪಾಳ್ಯ ವಾರ್ಡ್‌ನ ಬಿಬಿಎಂಪಿ ಸದಸ್ಯ ದಾಸೇಗೌಡ ಅವರು ಕೂಡ ಕೈ ಜೋಡಿಸಿದ್ದಾರೆ. ಗಣೇಶ್‌ ತಮ್ಮ ಅಭಿಮಾನಿ ಸಂಘದ ರೇಣು, ಜಗ್ಗಿ ಅವರ ಮುಂದಾಳತ್ವದಲ್ಲಿ ಸಹಾಯಕ ನಿರ್ದೇಶಕರು ಮತ್ತು ಸಹ ನಿರ್ದೇಶಕರಿಗೆ ಅಕ್ಕಿ,ಬೇಳೆ, ಸಕ್ಕರೆ, ಸೋಪು ಸೇರಿದಂತೆ ಇನ್ನಿತರೆ ದಿನಸಿ ವಿತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮೇಕಪ್‌ ಮ್ಯಾನ್‌, ಕಲಾನಿರ್ದೇಶಕರ ಸಹಾಯಕರು ಸೇರಿದಂತೆ ಹಲವು ವಿಭಾಗದಲ್ಲಿ ದುಡಿಯುವ ಸಿನಿಮಂದಿಗೆ ದಿನಸಿ ವಿತರಣೆ ಮಾಡಲಾಗುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next