Advertisement

ಗಣೇಶ ಬೋವಿಗೆ ಬೇಕಾಗಿದೆ ನೆರವಿನ ಹಸ್ತ

12:30 AM Jan 26, 2019 | |

ಸಿದ್ದಾಪುರ: ಎಪ್ಲೆಸ್ಟಿಕ್‌ ಅನೇಮಿಯಾ ಕಾಯಿಲೆಗೆ ತುತ್ತಾಗಿ  ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಒಳರೋಗಿಯಾಗಿ ದಾಖಲಾಗಿರುವ ಮಚ್ಚಟ್ಟು ಗ್ರಾಮದ ತೊಂಬಟ್ಟು ಸ್ವಾಮಿಪಾಲು ನಿವಾಸಿ ಗಣೇಶ ಬೋವಿ ಅವರಿಗೆ ನೆರವಿನ ಹಸ್ತ ಬೇಕಾಗಿದೆ.

Advertisement

ಇಲ್ಲಿನ ವಾಸುದೇವ್‌ ಬೋವಿ ಹಾಗೂ ದೇವಕಿ ಬೋವಿ ದಂಪತಿ ಪುತ್ರ ಗಣೇಶ್‌ ಕೃಷಿ, ಕೂಲಿಯೊಂದಿಗೆ ಬದುಕು ಕಟ್ಟಿಕೊಂಡಿದರು. ಆಕಸ್ಮಿಕವಾಗಿ ಆರೋಗ್ಯ ಹದಗೆಟ್ಟು ಅವರು ಮಣಿಪಾಲದ ಕೆಎಂಸಿಗೆ ಚಿಕಿತ್ಸೆಗಾಗಿ ಹೋದಾಗ, ಪರೀಕ್ಷಿಸಿದ ವೈದ್ಯರು ಎಪ್ಲೆಸ್ಟಿಕ್‌ ಅನೇಮಿಯಾ (Aplastic anemia)  ಎಂಬ ಅಪರೂಪದ ಕಾಯಿಲೆ ಬಾಧಿಸಿರುವುದಾಗಿ ತಿಳಿಸಿದರು. ಆರಂಭದಲ್ಲಿ ಮಣಿಪಾಲದಲ್ಲಿ ಚಿಕಿತ್ಸೆ ಪಡೆದ ಅವರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. 

33ವರ್ಷ ಪ್ರಾಯವಾಗಿರುವ ಅವರಿಗೆ ಬೋನ್‌ ಮ್ಯಾರೊ ಟ್ರಾನ್ಸ್‌ಪ್ಲಾಂಟೇಶನ್‌ ( Bone marrow transplantation)ಎನ್ನುವ ಚಿಕಿತ್ಸೆ ನೀಡಬೇಕಾಗಿದೆ. ಇದಕ್ಕೆ  ಸುಮಾರು 13 ಲಕ್ಷ ರೂ. ಅಂದಾಜು ವೆಚ್ಚ ತಗಲಬಹುದೆಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಯಾವುದೇ ವಿಮಾ ಸೌಲಭ್ಯಗಳೂ ಲಭ್ಯವಿಲ್ಲ. ಈ ವೆಚ್ಚವನ್ನು ಭರಿಸಲು ಸಾಧ್ಯವಿಲ್ಲದ ಬಡ ಕುಟುಂಬ ಈಗ ದಾನಿಗಳ ಸಹಾಯ ಯಾಚಿಸಿದ್ದಾರೆ.

ಸಹಾಯ ನೀಡ ಬಯಸುವವರು ತಂದೆ ವಾಸುದೇವ ಬೋವಿ, ಸ್ವಾಮೀಪಾಲು, ತೊಂಬಟ್ಟು, ಮಚ್ಚಟ್ಟು ಗ್ರಾಮ,ಕುಂದಾಪುರ ತಾಲೂಕು. ಮೊಬೈಲ್‌ ನಂ. 8105876745 ಅಥವಾ ತಂಗಿ ದಿವ್ಯ ಅವರ ಹೆಸರಿನಲ್ಲಿರುವ ಕರ್ನಾಟಕ ಬ್ಯಾಂಕ್‌ ಅಮಾಸೆಬೈಲು ಶಾಖೆಯ ಉಳಿತಾಯ ಖಾತೆ ನಂ. 0132500100485701 karanataka bank branch amasebail ಐಎಫ್‌ಸಿ ಕೋಡ್‌ ಕೆಎಆರ್‌ಬಿ 0000013 (ifsc KARB0000013) ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next