Advertisement

“ಗಂಧದ ಕುಡಿ’ಚಿತ್ರ ಇಂದು ತೆರೆಗೆ

03:25 AM Mar 29, 2019 | Sriram |

ಮಂಗಳೂರು: ಇನ್ವೆಂಜರ್‌ ಟೆಕ್ನಾಲಜೀಸ್‌ ಬ್ಯಾನರಿನಲ್ಲಿ ಕೆ. ಸತ್ಯೇಂದ್ರ ಪೈ ಹಾಗೂ ಕೆ. ಕೃಷ್ಣ ಮೋಹನ್‌ ಪೈ ನಿರ್ಮಾಣದಲ್ಲಿ ತಯಾರಾದ ಗಂಧದ ಕುಡಿ (ಹಿಂದಿಯಲ್ಲಿ ಚಂದನ್‌ವನ್‌)ಚಿತ್ರವು ಮಾ. 29ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ಮಾಪಕ ಸತ್ಯೇಂದ್ರ ಪೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಭಾರತ ಮಾತ್ರವಲ್ಲದೆ ಅಮೆರಿಕದ ಸ್ಯಾನ್‌ ಡಿಯಾಗೋ, ಮೆಕ್ಸಿಕೊ, ಚಿಲಿ ಸಹಿತ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡ ಈ ಚಿತ್ರ ತಂತ್ರಜ್ಞರಿಂದ ಪ್ರಶಂಸೆ ಗಳಿಸಿ ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ ಎಂದರು.

ಬಾಲಿವುಡ್‌ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಸಂತೋಷ್‌ ಶೆಟ್ಟಿ ಕಟೀಲು ಅವರು “ಗಂಧದ ಕುಡಿ’ ವಿಭಿನ್ನ ಶೈಲಿಯ ಚಿತ್ರವನ್ನು ನಿರ್ದೇಶನ ಮಾಡಿ ದ್ದಾರೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಅವರು ದುರಂತ ಸಾವಿಗೀಡಾಗಿದ್ದು ನಮ್ಮೆಲ್ಲರಿಗೂ ನೋವಿನ ಸಂಗತಿ ಎಂದರು.

ತಾರಾಗಣದಲ್ಲಿ…
ಮುಂಬಯಿಯ ನಿಧಿ ಸಂಜೀವ ಶೆಟ್ಟಿ ಭಾರತೀಯ ಮೂಲದ ಅಮೆರಿಕದ ಕೀಷಾ, ಆಶ್ಲಿನ್‌, ಪ್ರಣತಿ, ವಿN°àಶ್‌, ಶ್ರೀಶಾ, ಶ್ರೇಯಸ್‌ ಅಭಿನಯಿಸಿದ್ದಾರೆ. ಹಿರಿಯ ನಟ ರಮೇಶ್‌ ಭಟ್‌, ಶಿವಧ್ವಜ್‌ ಜ್ಯೋತಿ ರೈ, ಅರವಿಂದ ಶೆಟ್ಟಿ ಕೊಜಕೊಳ್ಳಿ, ದೀಪಕ್‌ ಶೆಟ್ಟಿ, ಯೋಗೀಶ್‌ ಕೋಟ್ಯಾನ್‌, ಜಿ.ಪಿ. ಭಟ್‌ ಬಣ್ಣಹಚ್ಚಿದ್ದಾರೆ. ಸಚಿನ್‌ ಶೆಟ್ಟಿ ಮತ್ತು ಲಕ್ಷ್ಮೀಶ್‌ ಶೆಟ್ಟಿ (ಸ್ಟಡಿ ಕ್ಯಾಮ್‌) ಛಾಯಾಚಿತ್ರಗ್ರಹಣ ರವಿರಾಜ್‌ ಗಾಣಿಗ ಸಂಕಲನ, ಪ್ರದೀಪ್‌ ರಾಯ್‌ ಕಲಾ ನಿರ್ದೇಶನ, ಪ್ರೀತಾ ಮಿನೇಜಸ್‌ ಸಹ ನಿರ್ದೇಶನ ಚಿತ್ರವನ್ನು ತಾಂತ್ರಿಕವಾಗಿ ಇಮ್ಮಡಿಗೊಳಿಸಿದೆ ಎಂದರು.

ಒಟ್ಟು ನಾಲ್ಕು ಹಾಡುಗಳಿದ್ದು, ರಝಾಕ್‌ ಪುತ್ತೂರು ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಪ್ರಸಾದ್‌ ಕೆ. ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ. ಕೃಷ್ಣ ಮೋಹನ್‌ ಪೈ, ಪ್ರಸಾದ್‌ ಕೆ. ಶೆಟ್ಟಿ, ನಿಧಿ ಶೆಟ್ಟಿ, ನರಸಿಂಹ ಮಲ್ಯ, ಅರವಿಂದ ಶೆಟ್ಟಿ, ರಜಾಕ್‌ ಪುತ್ತೂರು, ರವಿರಾಜ್‌ ಗಾಣಿಗ, ಚೇತನ್‌ ಉಪಸ್ಥಿತರಿದ್ದರು.

Advertisement

ಮಲೆನಾಡಿನ ರಮಣೀಯ ತಾಣಗಳು
ಪಶ್ಚಿಮ ಘಟ್ಟಗಳ ನಾಶದಿಂದ ಉಂಟಾ ಗುವ ಜಾಗತಿಕ ದುಷ್ಪರಿಣಾಮವನ್ನು ಎಳೆಎಳೆ ಯಾಗಿ ಬಿಚ್ಚಿಡುವ ಕಲಾತ್ಮಕ ಕಥಾವಸ್ತುವಿಗೆ ಕಮರ್ಷಿಯಲ್‌ ಟಚ್‌ ನೀಡಲಾಗಿದೆ. ಮಲೆನಾಡಿನ ರಮಣೀಯ ತಾಣಗಳು ಮನೋಜ್ಞವಾಗಿ ಮೂಡಿಬಂದಿವೆ. “ನಾಡೆಂ ದರೆ ಕನ್ನಡ ನಾಡು’ ಹಾಡು ವಿಜಯ್‌ ಪ್ರಕಾಶ್‌ ಧ್ವನಿಯಲ್ಲಿ ಹಿಟ್‌ ಆಗಿದೆ ಎಂದು ಸತ್ಯೇಂದ್ರ ಪೈ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next