Advertisement

ಆದೇಶಕ್ಕೆ ಗಣಪತಿ ಕುಟುಂಬ ಸ್ವಾಗತ 

08:25 AM Sep 06, 2017 | Team Udayavani |

ಮಡಿಕೇರಿ: ಡಿವೈಎಸ್‌ಪಿ ಎಂ.ಕೆ. ಗಣಪತಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆೆಗೆ ಒಪ್ಪಿಸುವಂತೆ ಸುಪ್ರೀಂ ಕೋರ್ಟ್‌ ಮಾಡಿರುವ ಆದೇಶವನ್ನು ಗಣಪತಿ ಅವರ ಕುಟುಂಬ ಸ್ವಾಗತಿಸಿದೆ. ಪತ್ರಕರ್ತರೊಂದಿಗೆ ಮಾತನಾಡಿದ ಗಣಪತಿ ಸಹೋದರ ಎಂ.ಕೆ. ಮಾಚಯ್ಯ, ಇದು ನಮಗೆ ದೊರಕಿರುವ ಮೊದಲ ಜಯ. ಸಿಬಿಐ ತನಿಖೆಯಿಂದ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಸಿಐಡಿ ಅಧಿಕಾರಿಗಳು ತಮಗೆ ಇಷ್ಟ ಬಂದಂತೆ ವರದಿ ತಯಾರಿಸಿದ್ದರೆಂದು ಆರೋಪಿಸಿದ ಅವರು ಸಿಬಿಐ ತನಿಖೆೆ ಸಂದರ್ಭ ಎಲ್ಲ ದಾಖಲೆ ನೀಡುವುದಾಗಿ ಹೇಳಿದ್ದಾರೆ. ಯಾರ ರಾಜೀನಾಮೆಯನ್ನೂ ನಾವು ಕೇಳುವುದಿಲ್ಲ. ಗಣಪತಿ ಅವರ ಸಾವಿಗೆ ನ್ಯಾಯ ಸಿಗಬೇಕಾಗಿದೆ ಎಂದು  ತಿಳಿಸಿದ್ದಾರೆ. ಪ್ರಕರಣದ ಸಿಬಿಐ ತನಿಖೆೆಗೆ ನಿರ್ದೇಶನ ನೀಡುವಂತೆ ಗಣಪತಿ ಕುಟುಂಬಸ್ಥರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ಇದೀಗ ಪ್ರಕರಣವನ್ನು ಸಿಬಿಐಗೆ ವಹಿಸಲು ಸೂಚಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next