Advertisement

ಗಾಜನೂರ್‌ ಹೆಸರಿನಲ್ಲಿ ಹೊಸಬರ ಚಿತ್ರ : ಜ. 16ಕ್ಕೆ ಚಿತ್ರದ ಮುಹೂರ್ತಕ್ಕೆ ಸಿದ್ಧತೆ

11:16 AM Jan 12, 2021 | Team Udayavani |

ಕನ್ನಡದಲ್ಲಿ “ಗಾಜನೂರು’ ಎಂಬ ಶೀರ್ಷಿಕೆಯನ್ನು ಇಟ್ಟುಕೊಂಡು ಹೊಸಬರ ಚಿತ್ರವೊಂದು ಸೆಟ್ಟೇರಲು ರೆಡಿಯಾಗುತ್ತಿದೆ. ನವನಟ ಅವತಾರ್‌ ಈ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಸಸ್ಪೆನ್ಸ್‌ ಕಂಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೀರ್ತಿ ಕಥೆ, ಚಿತ್ರಕಥೆ ಬರೆದಿದ್ದಾರೆ.

Advertisement

ಈ ಹಿಂದೆ ಎಸ್‌. ಮೋಹನ್‌, ನಂದಕಿಶೋರ್‌ ಮೊದಲಾದ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ
ಅನುಭವವಿರುವ ವಿಜಯ್‌ ಮೊದಲ ಬಾರಿಗೆ “ಗಾಜನೂರು’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ಗುಲಬರ್ಗಾ ಮೂಲದ ಅವಿನಾಶ್‌ “ಕೃತಿಕಾರಾಮ್‌ ಮೂವೀಸ್‌’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ
ಮೂರು ಹಾಡುಗಳಿಗೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ತನ್ವಿಕ್‌ ಛಾಯಾಗ್ರಹಣ, ಅಮಿತ್‌ ಜಾವಾಳ್ಕರ್‌ ಸಂಕಲನವಿದೆ. ಚಿತ್ರಕ್ಕೆ ಮಾಸ್‌ ಮಾದ ಸಾಹಸ ಹಾಗೂ ಭೂಷಣ್‌ ನೃತ್ಯ ಸಂಯೋಜಿಸುತ್ತಿದೆ. ಕ್ರಾಂತಿ ಕುಮಾರ್‌ ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ನಾಯಕ ನಟ ಅವತಾರ್‌ ಅವರೊಂದಿಗೆ ರವಿಶಂಕರ್‌, ತಬ್ಲನಾಣಿ, ಕುರಿ ಪ್ರತಾಪ್‌,
ಗೋಪಾಲಕೃಷ್ಣ ದೇಶಪಾಂಡೆ, ಬಾಬು ಹಿರಣ್ಣಯ್ಯ, ತರಂಗ ವಿಶ್ವ, ವಾಣಿ, ಸಂತು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ತೀರ್ಥಹಳ್ಳಿ, ಬೆಂಗಳೂರು ಸುತ್ತಮುತ್ತ ಸುಮಾರು 35 ದಿನಗಳ ಕಾಲ “ಗಾಜನೂರು’ ಚಿತ್ರದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ.

ಇದನ್ನೂ ಓದಿ:ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಮಾರಾಮಾರಿ: ಹಲವರಿಗೆ ಗಾಯ, ಪುರಸಭೆ ಸದಸ್ಯ ಸೇರಿ 10 ಜನರ ಬಂಧನ

ಸದ್ಯ “ಗಾಜನೂರು’ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೇ ಜ. 16ಕ್ಕೆ ಚಿತ್ರದ ಮುಹೂರ್ತಕ್ಕೆ ಸಿದ್ಧತೆ ಮಾಡಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next