Advertisement

ಧರ್ಮ-ಆಚಾರ-ವಿಚಾರದಿಂದ ಜೀವನ ವಿಕಾಸ: ಶ್ರೀ

11:08 AM Mar 21, 2019 | |

ಗದಗ: ಶಿವನ ಆದೇಶದಂತೆ ಲಿಂಗಸಂಭವರಾದ ಜ| ರೇಣುಕಾಚಾರ್ಯರ ಧರ್ಮಸ್ಥಾಪನೆ ಕಾರ್ಯ ಅನನ್ಯವಾದದ್ದು. ಬಿತ್ತಿದ ಧರ್ಮದ ಆಚಾರ ವಿಚಾರದಿಂದ ಮನುಷ್ಯನ ಜೀವನ ವಿಕಾಸಗೊಳ್ಳುವುದು ಎಂದು ಉಜ್ಜಯಿನಿ
ಪೀಠದ ಜ| ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಮುಳಗುಂದ ನಾಕಾದಲ್ಲಿರುವ ರೇಣುಕ ಮಂದಿರದಲ್ಲಿ ಜ| ಪಂಚಾಚಾರ್ಯ ಸೇವಾ ಸಂಘದಿಂದ ಏರ್ಪಡಿಸಿದ್ದ ರೇಣುಕಾಚಾರ್ಯ
ಜಯಂತಿ ಹಾಗೂ ರಥೋತ್ಸವ ಮತ್ತು ಶ್ರೀ ರೇಣುಕ ದರ್ಶನ ಪ್ರವಚನ ಮಂಗಲೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮೋದ್ಧಾರಕ್ಕಾಗಿ ಜ| ರೇಣುಕಾಚಾರ್ಯರು ವೀರಶೈವ ಧರ್ಮವನ್ನು ಗಟ್ಟಿಗೊಳಿಸಿದರು. ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಬಿತ್ತಿದವರು ಎಂದರು.

ವೀರಶೈವ ಧರ್ಮ ತಾಯಿ ಗರ್ಭದಲ್ಲಿದ್ದಾಗಿ ನಿಂದ ಹಿಡಿದು ಜೀವನದ ಕೊನೆವರೆಗೂ ಧಾರ್ಮಿಕ ಸಂಸ್ಕಾರಗಳನ್ನು ಕೊಡುತ್ತಾ ಬಂದಿರುವ ಧರ್ಮವಾಗಿದೆ. ಜೀವನದ ವಿಕಾಸ ಮತ್ತು ಭದ್ರವಾದ ಅಡಿಪಾಯಕ್ಕೂ ದಾರಿಯಾಗಿದೆ. ಧರ್ಮದ ಬಗ್ಗೆ ಹೇಳುವುದಕ್ಕಿಂತ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ವಿಶ್ವಬಂಧುತ್ವವನ್ನು ಸಾರಿದ ವೀರಶೈವ ಧರ್ಮ, ಧಾರ್ಮಿಕ ಮತ್ತು ಸಾಮಾಜಿಕವಾಗಿ ಮಾಡಿದ ಕಾರ್ಯ ಮಹತ್ವದ್ದಾಗಿದೆ ಎಂದರು.

ಕೆಲವು ವಿಚ್ಛಿದ್ರಿಕಾರಿ ಶಕ್ತಿಗಳು ವೀರಶೈವ ಧರ್ಮದ ಮೂಲ ಸಂಸ್ಕೃತಿ, ಪರಂಪರೆ, ಆಚಾರ- ವಿಚಾರಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಗದಗ ನಗರದಲ್ಲಿ ತಕ್ಕ ಉತ್ತರವನ್ನು ಕೊಟ್ಟಿದ್ದು, ಪೀಠ ಎಂದೂ ಮರೆಯುವುದಿಲ್ಲ. ಧರ್ಮ ಸಂಸ್ಕೃತಿಯನ್ನು ಎತ್ತಿಹಿಡಿದು, ಮಾನವ ಧರ್ಮದ ಮೌಲ್ಯಗಳನ್ನು ಸಮರ್ಥಿಸುವ ಕೆಲಸವು ಪಂಚಪೀಠಗಳ ತವರುಮನೆ. ಅದರಂತೆ ಗದಗ ನಗರದ ಭಕ್ತರು ಸರಿಯಾದ ವ್ಯವಸ್ಥೆಯಲ್ಲಿ ಉತ್ತರ ನೀಡುವುದರಿಂದ ಸಮಾಜ ಹೆಮ್ಮಪಡುವಂತಿದೆ ಎಂದರು.

ಹರ್ಲಾಪುರದ ಕೊಟ್ಟೂರೇಶ್ವರ ಮಠದ ಶ್ರೀಗಳು ಉಪದೇಶಾಮೃತಗೈದು, ಕೇವಲ ಹುಟ್ಟಿನಿಂದ ನಾವು ವೀರಶೈವರಾಗುವುದಿಲ್ಲ. ಇಷ್ಟಲಿಂಗ ಧರಿಸಿ ಪೂಜಿಸಿ, ವೀರಶೈವ ತತ್ವ, ಸಿದ್ಧಾಂತಗಳನ್ನು ಪಾಲಿಸುವವರು ಮಾತ್ರ ನಿಜವಾದ ವೀರಶೈವರು. ಮನುಷ್ಯ ಅರಿತು ಬಾಳಿದರೆ ಆತನ ಬದುಕು ಬಂಗಾರವಾಗುತ್ತದೆ ಎಂದರು.

Advertisement

ಪಂಚಾಕ್ಷರ ಶಿವಾಚಾರ್ಯ ಅಟ್ನೂರ ಶ್ರೀಗಳು ಮಾತನಾಡಿ, ಗುರುವಿನಿಂದ ಇಷ್ಟಲಿಂಗ ಪಡೆದುಕೊಂಡು ಗುರು ಬೋಧಿಸಿದ ಶಿವಪಂಚಾಕ್ಷರಿ ಮಹಾಮಂತ್ರ ಜಪಿಸಿದರೆ ವೀರಶೈವರಾದವರಿಗೆ ಮೋಕ್ಷ ಹೊಂದಲು ಸಾಧ್ಯವಾಗುವುದು. ಅವರ ಧರ್ಮ ಅವರವರಿಗೆ ಶ್ರೇಷ್ಠ. ಸರ್ವರೂ ಸಮನ್ವಯತೆಯಿಂದ ಬಾಳಬೇಕು ಎಂದರು.

ನರೇಗಲ್ಲನ ಮಲ್ಲಿಕಾರ್ಜುನ ಶಿವಾಚಾರ್ಯ ಹಿರೇಮಠ ಅವರು ಶ್ರೀ ರೇಣುಕ ದರ್ಶನ ಪ್ರವಚನವನ್ನು ಮಂಗಲ ಮಾಡಿದರು. ರೇಣುಕ ಮಂದಿರದ ಉತ್ತರಾಧಿಕಾರಿ ಚಂದ್ರಶೇಖರ ದೇವರು ನೇತೃತ್ವ ವಹಿಸಿದ್ದರು. ಮಲ್ಲಿಕಾರ್ಜುನ ಹಿರೇಮಠ ಗವಾಯಿಗಳು ಭಕ್ತಿ ಸಂಗೀತ ಸುಧೆ ಹರಿಸಿದರು. ಪ್ರೊ| ಗುರುಪಾದಯ್ಯ ಸಾಲಿಮಠ ರಚಿಸಿದ ಬಾಳಿಗೆ ಬೆಳಕು ಭಾಗ- 8 ಕೃತಿಯನ್ನು ಉಜ್ಜಯಿನಿ ಜಗದ್ಗುರುಗಳು ಬಿಡುಗಡೆಗೊಳಿಸಿದರು. ಸುರೇಶ ಅಬ್ಬಿಗೇರಿ ವೇದಿಕೆಯಲ್ಲಿದ್ದರು. ಪ್ರಾರಂಭದಲ್ಲಿ ಗುರುಸಿದ್ದಯ್ಯ ಹಿರೇಮಠ ವೇದಘೋಷ ಮಾಡಿದರು. ಚಂದ್ರು ಬಾಳಿಹಳ್ಳಿಮಠ ಸ್ವಾಗತಿಸಿದರು. ವಿ.ಕೆ. ಗುರುಮಠ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next