Advertisement

Gadag; ಬೈಕ್ ಗೆ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ; ಬೈಕ್ ಗೆ ಸವಾರನ ಕಾಲು ಕಟ್!

06:37 PM May 21, 2024 | Team Udayavani |

ಗದಗ: ಬೈಕ್ ಸವಾರನಿಗೆ ಹಿಂಬದಿಯಿಂದ ಬಂದ ಟಿಪ್ಪರ್ ಡಿಕ್ಕಿಯಾಗಿ ಬೈಕ್ ಸವಾರೋರ್ವನ ಕಾಲು ತುಂಡಾದ ಘಟನೆ ಗದಗ ಹೊರವಲಯದ ಆರ್.ಟಿ.ಓ ಕ್ರಾಸ್ ಬಳಿ ನಡೆದ ಘಟನೆ ನಡೆದಿದೆ. ಘಟನೆಯಲ್ಲಿ ಮತ್ತೋರ್ವ ಯುವಕ ಟಿಪ್ಪರ್ ಅಡಿ ಸಿಲುಕಿದ್ದಾನೆ.

Advertisement

ವಿನೋದ್ ಹುಡೆದ್ (22) ಹಾಗೂ ಮಂಜುನಾಥಗೌಡ ಬರಮಗೌಡ್ರ (23) ಗಾಯಾಳು ಬೈಕ್ ಸವಾರರು. ಇವರು ಗದಗ ತಾಲೂಕಿನ ಹರ್ತಿ ಗ್ರಾಮದ ನಿವಾಸಿಗಳು.

ಇವರಿಬ್ಬರು ಹೊಸ ಬೈಕ್ ಲೈಸೆನ್ಸ್ ಮಾಡಿಸಲು ಆರ್ ಟಿಓ ಕಚೇರಿಗೆ ಬರುತ್ತಿದ್ದರು. ಆರ್ ಟಿಓ ಕ್ರಾಸ್ ಬಳಿ ಹೆಲ್ಮೆಟ್ ಹಾಕಿಕೊಳ್ಳಲು ಏಕಾಏಕಿ ಬೈಕ್ ವೇಗ ಕಡಿಮೆ ಮಾಡಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಬೈಕ್ ಸವಾರರು ಘಟನಾ ಸ್ಥಳದಿಂದ ಹತ್ತಾರು ಮೀಟರ್ ದೂರ ಕ್ರಮಿಸಿದ್ದಾರೆ. ಕಾಲು ಕಳೆದುಕೊಂಡ ವಿನೋದ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next