Advertisement

ಪ್ರವಾಹ: ಶಾಸಕ ಸಿ.ಸಿ.ಪಾಟೀಲ ಕಣ್ಣೀರು

09:10 AM Aug 11, 2019 | Team Udayavani |

ಗದಗ: ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಪೀಡಿತರ ದಯನೀಯ ಸ್ಥಿತಿಗೆ ಮಾಜಿ ಸಚಿವ ಹಾಗೂ ನರಗುಂದ ಶಾಸಕ ಸಿ.ಸಿ.ಪಾಟೀಲ ಕಣ್ಣೀರಿಟ್ಟರು.

Advertisement

ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ, ಜನರ ಸಮಸ್ಯೆ ಹಾಗೂ ದುಃಖವನ್ನು ಆಲಿಸಿದರು. ಬಳಿಕ ಮಾತಿನ ಮಧ್ಯೆ ಗದ್ಗತಿರಾದ ಸಿ.ಸಿ.ಪಾಟೀಲ, ಜಿಲ್ಲೆಗೆ ಮತ್ಯಾವತ್ತೂ ಈ ರೀತಿಯ ಸಮಸ್ಯೆ ಎದುರಾಗಬಾರದು ಎನ್ನುತ್ತಲೇ ಮಾತು ನಿಲ್ಲಿಸಿ, ಕ್ಷಣಕಾಲ ಪುಟ್ಟಮಗುವಿನಂತೆ ಗಳಗಳನೇ ಅತ್ತರು.

ಬಳಿಕ ಮಾತು ಆರಂಭಿಸಿದ ಸಿ.ಸಿ.ಪಾಟೀಲ, ಜಿಲ್ಲೆಯ ಪ್ರವಾಹಕ್ಕೊಳಗಾಗಿರುವ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಶಾಶ್ವತ ಮನೆ ಕಲ್ಪಿಸುವುದರೊಂದಿಗೆ ಬೆಳೆ ಹಾನಿಗೆ ಪರಿಹಾರ ನೀಡಿ, ದಿನಬಳಕೆ ವಸ್ತುಗಳನ್ನೂ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ. ನೆರೆ ಸಂತ್ರಸ್ತರ ರಕ್ಷಣೆಗೆ ಜಿಲ್ಲಾಡಳಿತ ಸಕಲ ಕ್ರಮ ಜರುಗಿಸಿದೆ, ನೆರೆ ಪೀಡಿತ ಪ್ರದೇಶಗಳ ಜನರಿಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ನಾವು ವಿರಮಿಸುವುದಿಲ್ಲ ಎಂದು ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಎಸ್.ಪಾಟೀಲ, ಬಿಜೆಪಿ ಪ್ರಮುಖರಾದ ಅನಿಲ್ ಮೆಣಸಿನಕಾಯಿ, ಮೋಹನ ಮಾಳಶೆಟ್ಟಿ, ಶ್ರೀಪತಿ ಉಡುಪಿ, ಎಂ.ಎಂ.ಹಿರೇಮಠ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next