Advertisement

ಗದಗ : ಅಪರಿಚಿತ ವಾಹನ ಹರಿದು ಮೂವರ ದೇಹ ಛಿದ್ರ 

09:51 AM May 03, 2017 | |

ಗದಗ : ಇಲ್ಲಿನ ಕೊಪ್ಪಳ ರಸ್ತೆಯಲ್ಲಿರುವ ಸಂಭಾಪುರ ಕ್ರಾಸ್‌ ಬಳಿ ಅಪರಿಚಿತ ವಾಹನವೊಂದು ಹರಿದು ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. 

Advertisement

ಅಂದಾಜಿನಂತೆ ಘನ ವಾಹನ ತಲೆಯ ಮೇಲೆಯೆ ಹರಿದಿದ್ದು, ಮೂವರ ತಲೆಗಳು ಛಿದ್ರವಾಗಿರುವುದಾಗಿ ವರದಿಯಾಗಿದೆ. 

ಮೃತರು ನವಲಗುಂದ ಮೂಲದ ರಾಜ್‌ ಸಾಬ್‌, ಅಮೀನ್‌ ಮತ್ತು ಮಂಜುನಾಥ್‌ ಎಂದು ತಿಳಿದು ಬಂದಿದೆ. 

ಸ್ಥಳಕ್ಕೆ ಗದಗ ಜಿಲ್ಲಾ ಎಸ್‌ಪಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next