Advertisement

ಧರ್ಮಸ್ಥಳ ನೇತ್ರಾವತಿ ಪ್ರದೇಶಕ್ಕೆ ಜಿ.ಪಂ. ಸಿಇಒ ಭೇಟಿ

03:30 AM May 21, 2019 | sudhir |

ಬೆಳ್ತಂಗಡಿ: ಧರ್ಮಸ್ಥಳದಲ್ಲೂ ನೀರಿನ ಅಭಾವ ಕಂಡು ಬಂದಿರುವುದರಿಂದ ಸೋಮವಾರ ಜಿ.ಪಂ. ಸಿಇಒ ಡಾ| ಸೆಲ್ವಮಣಿ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

Advertisement

ನೇತ್ರಾವತಿ ಸ್ನಾನಘಟ್ಟದ ಕಿಂಡಿ ಅಣೆ ಕಟ್ಟು ನೀರು ಮುಂದಿನ 10ರಿಂದ 15 ದಿನಗಳವರೆಗೆ ಧರ್ಮಸ್ಥಳ ಪರಿಸರಕ್ಕೆ ಲಭ್ಯವಾಗಲಿದೆ. ನೀರಿನ ಮಿತ ಬಳಕೆ ಅನಿವಾರ್ಯವಾಗಿದ್ದು, ಭವಿಷ್ಯದ ಯೋಜನೆಗೆ ಬೇರೆ ಕಡೆ ಚೆಕ್‌ ಡ್ಯಾಂ ನಿರ್ಮಿಸುವ ಕುರಿತು ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿ.ಪಂ. ಸಿ.ಇ.ಒ ಡಾ| ಸೆಲ್ವಮಣಿ ತಿಳಿಸಿದ್ದಾರೆ.

ಜಿ.ಪಂ. ಅಧಿಕಾರಿಗಳ ತಂಡ ದೊಂದಿಗೆ ಬೆಳ್ತಂಗಡಿ ತಹಶೀಲ್ದಾರ್‌, ಜಿ.ಪಂ. ಕಾ.ನಿ. ಇಂಜಿನಿಯರ್‌, ಪಂ. ರಾಜ್‌ ಮತ್ತು ಗ್ರಾ. ಅಭಿವೃದ್ಧಿ, ಜಲ ಮಂಡಳಿ ಸ. ಎಂಜಿನಿಯರ್‌, ಪಿಡಿಒ, ಸ್ಥಳೀಯ ವಿಎ ಕಲ್ಮಂಜ ಸದಾಶಿವ ದೇವಸ್ಥಾನ ಸಂಗಮ ಪ್ರದೇಶದ ವರೆಗೆ ಸಮೀಕ್ಷೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next