Advertisement

ದೇಶದಲ್ಲೇ ಮೊದಲ ಬಾರಿಗೆ ಜಾರಿಯ ಹೆಗ್ಗಳಿಕೆ

12:07 AM Oct 27, 2020 | mahesh |

ಬೆಂಗಳೂರು: ಗ್ರಾಮೀಣ ಭಾಗದಲ್ಲಿ ಉಂಟಾಗುವ ಪ್ರಾಕೃತಿಕ ವಿಕೋಪಗಳು ಮತ್ತು ಮಾನವ ಪ್ರೇರಿತ ವಿಪತ್ತುಗಳ ತಡೆ ಮತ್ತು ನಿರ್ವ ಹಣೆಗೆ “ಗ್ರಾಮ ಪಂಚಾಯತ್‌ ಮಟ್ಟದ ವಿಪತ್ತು ನಿರ್ವಹಣ ಯೋಜನೆ’ ಸಿದ್ಧಪಡಿಸಲಾಗಿದೆ.

Advertisement

ಈವರೆಗೆ ರಾಜ್ಯ ಮಟ್ಟದಲ್ಲಿದ್ದ ವಿಪತ್ತು ನಿರ್ವಹಣ ಯೋಜನೆ ಇನ್ನು ಮುಂದೆ ಗ್ರಾ.ಪಂ. ಮಟ್ಟದಲ್ಲೂ ಜಾರಿಗೆ ಬರಲಿದೆ. ಗ್ರಾಮೀಣ ಮಟ್ಟದಲ್ಲಿ ಇದನ್ನು ಜಾರಿಗೆ ತರುತ್ತಿರುವ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.

ಪ್ರಕೃತಿ ವಿಕೋಪಗಳ ತಡೆ ಮತ್ತು ನಿರ್ವ ಹಣೆಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತೀ ವರ್ಷ ಸಮಗ್ರ ನಿರ್ವಹಣ ಯೋಜನೆ ರೂಪಿಸ ಲಾಗು ತ್ತಿದ್ದು, ಈ ಬಾರಿ ಗ್ರಾ.ಪಂ. ಮಟ್ಟಕ್ಕೂ ಇಳಿಸಲಾಗಿದೆ.

“ವಿಪತ್ತು ನಿರ್ವಹಣ ಕಾಯ್ದೆ- 2005’ರಡಿ ಕಡ್ಡಾಯವಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಇಲಾಖಾವಾರು ವಿಪತ್ತು ನಿರ್ವಹಣ ಯೋಜನೆ ಸಿದ್ಧಪಡಿಸಬೇಕು. ಕೋವಿಡ್‌-19 ಮತ್ತಿತರ ಸಾಂಕ್ರಾಮಿಕ ಕಾಯಿಲೆ ಗಳ ನಿರ್ವಹಣೆ ಕೂಡ ಈ ವರ್ಷದ ಯೋಜನೆಯಲ್ಲಿ ಸೇರ್ಪಡೆಯಾಗಿದೆ.

ಸಾವು-ನೋವು ತಡೆಯಲು ಕ್ರಮ
ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ, ಸಾವು- ನೋವು ಉಂಟಾಗುವ ಸಾಧ್ಯತೆಯಿರುತ್ತದೆ. ಅದರ ನಿರ್ವಹಣೆಗೆ ಅಲ್ಪಾವಧಿ ಮತ್ತು ದೀರ್ಘಾ ವಧಿ ಯೋಜನೆ ಸಿದ್ಧಪಡಿಸಿಕೊಂಡರೆ ಹಾನಿ, ಸಾವು-ನೋವು ತಡೆಯಬಹುದು. ಹಾಗಾಗಿ ಈ ಬಾರಿಯ ರಾಜ್ಯ ಮಟ್ಟದ ವಿಪತ್ತು ನಿರ್ವಹಣ ಯೋಜನೆ ಯಲ್ಲಿ ಗ್ರಾ.ಪಂ. ಮಟ್ಟದ ವಿಪತ್ತು ನಿರ್ವಹಣ ಯೋಜನೆಗೆ ಒತ್ತು ಕೊಡಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

Advertisement

ಯೋಜನೆ ಕಾರ್ಯಗತ ಹೇಗೆ?
ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಬೇಕಾಗುವ ಮೂಲ ಸೌಕರ್ಯ, ಸಂಪನ್ಮೂಲಗಳ ಮಾಹಿತಿ ಸಂಗ್ರಹಿಸಿ ಅದಕ್ಕೆ ತಕ್ಕಂತೆ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ. ಇದ ಕ್ಕಾಗಿ ವಿವಿಧ ಇಲಾಖೆಗಳು, ಸಂಘ-ಸಂಸ್ಥೆಗಳು, ಸ್ಥಳೀಯ ಮಟ್ಟದ ತಜ್ಞ ಮತ್ತು ಕೌಶಲಯುಕ್ತ ವ್ಯಕ್ತಿಗಳ  ನೆರವು ಪಡೆದು ಕೊಳ್ಳಲಾಗುತ್ತದೆ. ಸ್ಥಳೀಯ ಪರಿಸ್ಥಿತಿ ಆಧರಿಸಿ ಯೋಜನೆ ಜಾರಿಗೆ ಮಾರ್ಗಸೂಚಿಗಳನ್ನು ರೂಪಿಸಲಾಗುತ್ತದೆ.

ಗ್ರಾ.ಪಂ. ಮಟ್ಟದ ವಿಪತ್ತು ನಿರ್ವಹಣ ಯೋಜನೆ ಬಗ್ಗೆ ಈಗಾಗಲೇ ಪಂಚಾಯತ್‌ ಸಿಬಂದಿಗೆ ಎರಡು ಹಂತಗಳ ತರಬೇತಿ ನೀಡ ಲಾಗಿದೆ. ಜಿ.ಪಂ. ಉಪ ಕಾರ್ಯ ದರ್ಶಿ ಯವರನ್ನು ಯೋಜನೆಯ ನೋಡಲ್‌ ಅಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ಸದ್ಯ ಎಲ್ಲ ಪಂಚಾಯತ್‌ಗಳಲ್ಲಿ ಆಡ ಳಿ  ತಾಧಿ ಕಾರಿಗಳು  ಇರು ವುದ ರಿಂದ ಅವರು ಯೋಜನೆ ಸಿದ್ಧಪಡಿಸಿ ಕೊಳ್ಳ ಬೇಕಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಆಯುಕ್ತರು, ಪಂಚಾಯತ್‌ರಾಜ್‌ ಆಯುಕ್ತಾಲಯ

  ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next