Advertisement

Mangaluru:ಭವಿಷ್ಯದ ಮಂಗಳೂರಿಗೆ ಹಸುರು ಅಗತ್ಯ: ಶಶಿಧರ ಹೆಗ್ಡೆ

03:55 PM Jul 29, 2024 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ನೇತೃತ್ವ ಹಾಗೂ ಉದಯವಾಣಿ ಸಹಭಾಗಿತ್ವದಲ್ಲಿ ನಗರ ವ್ಯಾಪ್ತಿಯಲ್ಲಿ 10 ಸಾವಿರ ಗಿಡಗಳನ್ನು ನೆಡುವ ಮಹತ್ವಾಕಾಂಕ್ಷೆಯ “ಹಸಿರೇ ಉಸಿರು’ ಅಭಿಯಾನದ ಪ್ರಯುಕ್ತ 11ನೇ ಕಾರ್ಯಕ್ರಮಕ್ಕೆ ದೇರೆಬೈಲ್‌ ದಕ್ಷಿಣ ವಾರ್ಡ್‌ನ ದಡ್ಡಲಕಾಡಿನಲ್ಲಿ ರವಿವಾರ ಚಾಲನೆ ನೀಡಲಾಯಿತು.

Advertisement

ಮಾಜಿ ಮೇಯರ್‌, ಸ್ಥಳೀಯ ಮನಪಾ ಸದಸ್ಯಎಂ. ಶಶಿಧರ ಹೆಗ್ಡೆ ಮಾತನಾಡಿ, ಮಂಗಳೂರು ನಗರ ಹಸುರೀಕರಣ ಮಾಡಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಭವಿಷ್ಯದ ದಿನಗಳಿಗೆ ಹಸುರು ಅತ್ಯಂತ ಅಗತ್ಯ ಮತ್ತು ಅನಿವಾರ್ಯ. ಈ ಕಾರಣದಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಾಗಿದೆ.ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು ಅವರ ಆಶಯದಂತೆ ಮಂಗಳೂರು ಪಾಲಿಕೆಯು “ಉದಯವಾಣಿ’ ಸಹಯೋಗದಲ್ಲಿ ವಾರ್ಡ್‌ ಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸುವುದು ಅಭಿನಂದನೀಯ ಎಂದರು.

ಕೋರ್ದಬ್ಬು ದೈವಸ್ಥಾನದ ಗುರಿಕಾರ ಜಯಶೀಲ, ಪಾಲಿಕೆ ನಾಮ ನಿರ್ದೇಶಿತ ಸದಸ್ಯ ಚೇತನ್‌ ಕುಮಾರ್‌, ಕಾಂಗ್ರೆಸ್‌ ವಾರ್ಡ್‌ ಅಧ್ಯಕ್ಷ ರಾಜೇಂದ್ರ ಚಿಲಿಂಬಿ, ಕಾಂಗ್ರೆಸ್‌ ಬೂತ್‌ ಅಧ್ಯಕ್ಷ ಪ್ರವೀಣ್‌ ಚಂದ್ರಹಾಸ್‌ ಶೆಟ್ಟಿ, ಸಂದೇಶ್‌, ರವಿ, ಪೃಥ್ವಿ, ಪಾಲಿಕೆ ಆರೋಗ್ಯ ನಿರೀಕ್ಷಕ ಅರುಣ್‌ ಕುಮಾರ್‌, ಆರೋಗ್ಯ ನಿರೀಕ್ಷಕ ಸಹಾಯಕ ಸುದೇಶ್‌, ದಶರಥ ಕಾಪಿಕಾಡ್‌, ಅಶೋಕ್‌, ಶಶಿ, ಸುಧಾಕರ್‌, ದಶರಥ ದಡ್ಡಲಕಾಡ್‌, ಆನಂದ ದಡ್ಡಲಕಾಡ್‌ ಮತ್ತಿತರರಿದ್ದರು.

ಬ್ಲ್ಯಾ ಕ್‌ಸ್ಪಾಟ್‌ ಜಾಗವಿನ್ನು ಹಸುರುಮಯ
ಪರಿಸರದ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ದಡ್ಡಲಕಾಡಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಹಿಂದೆ ಈ ಪರಿಸರದಲ್ಲಿ ತ್ಯಾಜ್ಯ ಎಸೆಯುವ ಬ್ಲ್ಯಾಕ್‌ಸ್ಪಾಟ್‌ ನಿರ್ಮಾಣಗೊಂಡು ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಇದೀಗ ತ್ಯಾಜ್ಯ ಇರುವ ಪ್ರದೇಶ ಸ್ವಚ್ಛಗೊಳಿಸಿ ಅಲ್ಲಿ ವಿವಿಧ ರೀತಿಯ ಗಿಡ ನೆಡುವ ಕಾರ್ಯಕ್ರಮ ನಡೆದಿದೆ. ಇದರೊಂದಿಗೆ ಪರಿಸರ ಸಂರಕ್ಷಣೆಯ ಜತೆ ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next