Advertisement

ಚೆಕ್‌ಪೋಸ್ಟ್‌ಗಳಲ್ಲಿ ಮತ್ತಷ್ಟು ಬಿಗು ತಪಾಸಣೆ

09:51 PM Mar 28, 2020 | Sriram |

ಕುಂದಾಪುರ: ಉಡುಪಿ ಜಿಲ್ಲೆಯ ಶಿರೂರು, ಹೊಸಂಗಡಿ, ಕುಂದಾಪುರ ನಗರ ಭಾಗದಲ್ಲಿ ಮಾತ್ರವಲ್ಲದೆ ಅಂಪಾರು ಮತ್ತಿತರ ಕೆಲವೆಡೆಗಳಲ್ಲಿಯೂ ಶನಿವಾರದಿಂದ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಕರ್ಫ್ಯೂ ಸಮರ್ಪಕ ಜಾರಿ ನಿಟ್ಟಿನಲ್ಲಿ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಮತ್ತಷ್ಟು ಬಿಗಿಗೊಳ್ಳುತ್ತಿದೆ.

Advertisement

ಜಿಲ್ಲೆಯಿಂದ ಯಾವುದೇ ವಾಹನಗಳು ಹೊರ ಹೋಗದ ಹಾಗೇ ಹಾಗೂ ಅನ್ಯ ಜಿಲ್ಲೆಗಳ ವಾಹನಗಳು ಉಡುಪಿಗೆ ಬರದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಕೆಲವು ಚೆಕ್‌ಪೋಸ್ಟ್‌
ಗಳನ್ನು ಹಾಕಲಾಗಿದ್ದು, ಇಲ್ಲಿ ಪೊಲೀಸರು ಎಲ್ಲ ವಾಹನಗಳ ಬಗ್ಗೆಯೂ ನಿಗಾ ವಹಿಸುತ್ತಿದ್ದಾರೆ.
ಕರ್ಫ್ಯೂ ಜಾರಿಯಾದಗಿನಿಂದಲೇ ಇತರೆ ಜಿಲ್ಲೆಗಳ ವಾಹನ ಪ್ರವೇಶಿ ಸುವಂತಿಲ್ಲ ಎನ್ನುವ ನಿಯಮವಿದ್ದರೂ, ಶನಿವಾರದಿಂದ ಇದು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಜನ ಸಂಚಾರ ವಿರಳ
ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಭಾಗದಲ್ಲಿ ಜನ ಸಂಚಾರ ವಿರಳವಾಗಿತ್ತು. ವಾಹನ ಸಂಚಾರವೂ ಕಡಿಮೆಯಿತ್ತು. ಅಂಗಡಿಗಳು ಕೂಡ ಹೆಚ್ಚಿನ ಪೇಟೆಗಳಲ್ಲಿ ಒಂದೋ, ಎರಡೋ ತೆರೆದಿತ್ತು ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next