Advertisement

ಸದನದಲ್ಲಿ ರಾಮ ಜಪ : ನಗೆಗಡಲಲ್ಲಿ ಕಲಾಪ

04:48 PM Mar 23, 2022 | Team Udayavani |

ವಿಧಾನಸಭೆ : ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೆಣಕಿದ್ದು ಸದನದಲ್ಲಿ ಹಾಸ್ಯಮಯ ವಾತಾವರಣವನ್ನು ನಿರ್ಮಿಸಿತು.

Advertisement

ಮಧ್ಯಾಹ್ನದ ಕಲಾಪ ಸಂದರ್ಭದಲ್ಲಿ ಸಿದ್ದರಾಮಯ್ಯ ಮಧ್ಯ ಪ್ರವೇಶಕ್ಕೆ ಎದ್ದು ನಿಂತಾಗ ” ಒಂದು ನಿಮಿಷ ಸಾರ್, ದೇವರಾಗಿ.. ನಮ್ ಮನೆ ದೇವ್ರು ಹೆಸ್ರು ಇಟ್ಕಂಡಿದೀರಿ, ಹಿಂಗಾಡ್ತಿರಲ್ಲ ಎಂದು ವ್ಯಂಗ್ಯವಾಡಿದರು.

ನಿಮ್ಮ ಮನೆ ದೇವರು ಯಾರು ಸಾರ್ ಎಂದು ಸಚಿವ ಸುಧಾಕರ್ ಪ್ರಶ್ನಿಸಿದಾಗ ಮಾಧುಸ್ವಾಮಿ ” ಸಿದ್ದರಾಮೇಶ್ವರ” ಎಂದು ಉತ್ತರಿಸಿದರು. ಆಗ ಮಧ್ಯ ಪ್ರವೇಶ ಮಾಡಿದ ಕಂದಾಯ ಸಚಿವ ಅಶೋಕ ” ಮನೆ ದೇವರಂತೆ ಬಿಟ್ಬಿಡಿ ಸರ್” ಎಂದರು. ನಮ್ ಮನೆ ದೇವ್ರು ಹೆಸ್ರು ಇಟ್ಕಂಡು ಇವ್ರು ಹಿಂಗಾಡ್ತಾರಲ್ರೀ ಅಶೋಕ್ ಎಂದು ಮಾಧುಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.

ಯೇ ಹಾಗೇನು‌ ಇಲ್ರಪ್ಪಾ ನಮ್ ಮನೆ ದೇವ್ರು ಸಿದ್ದರಾಮೇಶ್ವರ, ನಮ್ ಅಪ್ಪನ್ ಹೆಸ್ರು ಸಿದ್ದರಾಮೇಗೌಡ, ನಮ್ ಊರ್ ಹೆಸ್ರು ಸಿದ್ದರಾಮನಹುಂಡಿ ಎಂದು ಸಿದ್ದರಾಮಯ್ಯ ದೇಸಿ ನಗೆ ನಕ್ಕಾಗ ” ನಾವು ಸಿದ್ದರಾಮನ ಒಕ್ಲು ಕೂತ್ಕಳಿ” ಎಂದು ಮಾಧುಸ್ವಾಮಿ ತಿರುಗೇಟು ನೀಡಿದರು.ಎಲ್ಲಾ ರಾಮ.. ರಾಮ.. ರಾಮ.. ರಾಮ.. ರಾಮ.. ಎಂದು ಅಶೋಕ್ ಚರ್ಚೆಗೆ ವಿರಾಮ‌ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next