Advertisement

ಕಾರುಣ್ಯ ಫೌಂಡೇಶನ್‌ಗೆ ಧನ ಸಹಾಯ

05:25 PM Nov 11, 2018 | |

ಮುಂಬಯಿ: ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಮತ್ತು ಪದಾಧಿಕಾರಿಗಳು ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ದಾಖಲಾದ ಒಳ ರೋಗಿಗಳ ಶುಶ್ರೂಷೆ ಮಾಡುವ ಸಂಬಂಧಿಕರಿಗೆ ಆಹಾರದ ವ್ಯವಸ್ಥೆ ಮಾಡುವುದಕ್ಕಾಗಿ ಒಂದು ತಿಂಗಳ ವೆಚ್ಚ 2.50 ಲಕ್ಷ ರೂ. ಗಳನ್ನು ಎನ್‌ಜಿಒ ಸಂಸ್ಥೆ ಕಾರುಣ್ಯ ಫೌಂಡೇಶನ್‌ಗೆ ನೀಡಿದರು.

Advertisement

 ಒಕ್ಕೂಟದ ಪದಾಧಿಕಾರಿಗಳಾದ ವಿಜಯ ಪ್ರಸಾದ್‌ ಆಳ್ವ, ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ, ನಿರ್ದೇಶಕರಾದ ಕರ್ನಿರೆ ವಿಶ್ವನಾಥ ಶೆಟ್ಟಿ, ರತ್ನಾಕರ್‌ ಶೆಟ್ಟಿ ಮುಂಡ್ಕೂರು, ಉಳೂ¤ರು ಮೋಹನ್‌ನಾಸ್‌ ಶೆಟ್ಟಿ  ಉಪಸ್ಥಿತರಿದ್ದರು.  

ನೆರವು ನೀಡಿಕೆ 
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಂಗಳೂರಿನ ಕಚೇರಿಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ ಸಮಾಜದ ಆರ್ಥಿಕವಾಗಿ ಹಿಂದಿರುವ ನೂರಾರು ಮಂದಿಗೆ ಮದುವೆ, ಮನೆ ನಿರ್ಮಾಣ ಇನ್ನಿತರ ಕಾರ್ಯಗಳಿಗೆ ಬೃಹತ್‌ ಮಟ್ಟದ ನಿಧಿಯನ್ನು ಐಕಳ ಹರೀಶ್‌ ಶೆಟ್ಟಿ ಅವರ ನೇತೃತ್ವದ ತಂಡವು ನೀಡಿ ಸಹಕರಿಸಿತು. ಒಕ್ಕೂಟವು ಈ ರೀತಿಯ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next