Advertisement

ಸ್ಮಾರ್ಟ್‌ ಕ್ಲಾಸ್‌ಗೆ ಧನಸಹಾಯ

06:22 PM Mar 22, 2020 | Suhan S |

ತಾವರಗೇರಾ: ಸಮೀಪದ ಹಿರೇತೆಮ್ಮಿನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ನ್ನು ಆರಂಭಿಸಲು ಗ್ರಾಮಸ್ಥರೇ ಸಾವಿರಾರು ರೂ. ದೇಣಿಗೆ ಕೊಟ್ಟಿರುವುದು ಮಾದರಿಯಾಗಿದೆ ಎಂದು ವಲಯ ಸಂಪನ್ಮೂಲ ವ್ಯಕ್ತಿ ಶರಣಪ್ಪ ತುಮರಿಕೊಪ್ಪ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದ ಹಿರಿಯರು, ಶಿಕ್ಷಣ ಪ್ರೇಮಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ ಸ್ಮಾರ್ಟ್‌ ಕ್ಲಾಸ್‌ ಆರಂಭಿಸಲು 90 ಸಾವಿರ ರೂ. ಕೊಡುವುದಾಗಿ ವಾಗ್ಧಾನ ಮಾಡಿದ್ದಾರೆ. ಪಾಲಕರ ಸಭೆಯಲ್ಲಿ ಭಾಗಿಯಾಗಿದ್ದ ಈ ದಾನಿಗಳು ಸಭೆಯಲ್ಲಿ 23 ಸಾವಿರ ರೂ. ಸಂಗ್ರಹಿಸಿ ದೇಣಿಗೆ ನೀಡಿದ್ದಾರೆ. ಆದಷ್ಟು ಬೇಗ ಉಳಿದ ಹಣವನ್ನು ನೀಡುವುದಾಗಿ ದಾನಿಗಳು ತಿಳಿಸಿದ್ದಾರೆ ಎಂದು ಸಿಆರ್‌ಸಿ ಶರಣಪ್ಪ ತುಮರಿಕೊಪ್ಪ ತಿಳಿಸಿದ್ದಾರೆ.

ಶಿಕ್ಷಕರಾದ ಬಸವರಾಜ ಅಂಗಡಿ, ಬಸವರಾಜ ರಡ್ಡಿ, ಗ್ರಾಮಸ್ಥರಾದ ಯಂಕಣ್ಣ ಮಾಸ್ತರ್‌, ಛತ್ರಪ್ಪ ಕಂಬಳಿ, ಮುದಕಪ್ಪ, ಶ್ಯಾಮಣ್ಣ ಮ್ಯಾದರಡೊಕ್ಕಿ, ಮಹೇಶ ಕನ್ನಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next