Advertisement

ಸಾಕಾರಗೊಳ್ಳಲಿ ಸಾರಕರೆ ಸೇತುವೆ ಕನಸು

12:38 PM May 17, 2018 | Team Udayavani |

ಸವಣೂರು: ಪುತ್ತೂರು ತಾ| ಪುಣ್ಚಪ್ಪಾಡಿ ಗ್ರಾಮದ ಸಾರಕರೆ, ಕೆಯ್ಯೂರು ಗ್ರಾಮದ ಓಲೆಮುಂಡೋವು ನಡುವೆ ಗೌರಿ ಹೊಳೆ ಹರಿಯುತ್ತಿದೆ. ಹೊಳೆಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಅನೇಕ ಬಾರಿ ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಗ್ರಾಮ ಸಭೆಗಳಲ್ಲಿ ಸೇತುವೆ ಬೇಡಿಕೆ ಕುರಿತು ನಿರಂತರವಾಗಿ ಪ್ರಸ್ತಾಪವಾಗುತ್ತಿದ್ದರೂ ಇಲ್ಲಿಯ ತನಕ ಯಾವುದೇ ರೀತಿಯ ಸ್ಪಂದನೆ ದೊರೆಯದೇ ಕನಸಾಗಿಯೇ ಉಳಿದಿದೆ.

Advertisement

ಗೌರಿ ಹೊಳೆಗೆ ಸೇತುವೆ ನಿರ್ಮಾಣಗೊಂಡಲ್ಲಿ ಕೆಯ್ಯೂರು, ತಿಂಗಳಾಡಿ ಕುಂಬ್ರ ಭಾಗಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಈ ಸೇತುವೆ ಯನ್ನು ಸಂಪರ್ಕಿಸುವ ಕುಂಬ್ರ- ತಿಂಗಳಾಡಿ- ಓಲೆಮುಂಡೋವು ರಸ್ತೆ ಅಗಲೀ ಕರಣಗೊಂಡು ಡಾಮರೀಕರಣ ವಾಗಿದ್ದರೆ, ಸವಣೂರು- ಪುಣ್ಚಪ್ಪಾಡಿ- ಸಾರಕರೆ ಸಂಪರ್ಕಿಸುವ 4 ಕಿ.ಮೀ. ಡಾಮರೀಕರಣ ವಾಗದೆ ರಸ್ತೆ ತೀರಾ ಹದಗೆಟ್ಟಿದೆ.

ಭರವಸೆ ಇದೆ 
ಸೇತುವೆ ನಿರ್ಮಿಸುವಂತೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಬಹುದಿನಗಳ ನಮ್ಮ ಕನಸು ನನಸಾದಲ್ಲಿ ಗ್ರಾಮ ಅಭಿವೃದ್ಧಿ ಹೊಂದಲಿದೆ. ಈ ಬಾರಿ ಸೇತುವೆಯ ಕನಸು ಈಡೇರುವ ಭರವಸೆ ಇದೆ.
– ಗಿರಿಶಂಕರ್‌ ಸುಲಾಯ
ಸವಣೂರು ಗ್ರಾ.ಪಂ. ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next