Advertisement

ಇಂದಿನಿಂದ ಕೃಷ್ಣಾಗೆ ಹಿಡಕಲ್‌ನಿಂದ ನೀರು ಬಿಡುಗಡೆ

06:27 AM May 20, 2019 | Team Udayavani |

ಬೆಳಗಾವಿ: ಹನಿ ನೀರಿಗಾಗಿ ಪರಿತಪಿಸುತ್ತಿರುವ ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಕೊನೆಗೂ ನೀರು ಸಿಗುತ್ತಿದೆ. ಆದರದು ಮಹಾರಾಷ್ಟ್ರದ ಜಲಾಶಯಗಳಿಂದಲ್ಲ. ಒಂದೇ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣೆಗೆ, ಸಕಾಲದಲ್ಲಿ ಘಟಪ್ರಭೆ ಆಸರೆಯಾಗಿ ಬಂದಿದ್ದಾಳೆ.

Advertisement

ನೀರಿಗೆ ಪ್ರತಿಯಾಗಿ ನೀರೇ ಬೇಕು ಎಂದು ಮಹಾರಾಷ್ಟ್ರ ಸರ್ಕಾರ ಹಠ ಹಿಡಿದಿರುವುದರಿಂದ ಕರ್ನಾಟಕ ಸರ್ಕಾರ ಮಹಾರಾಷ್ಟ್ರದಿಂದ ನೀರಿನ ಆಸೆ ಬಿಟ್ಟು ನಮ್ಮಲ್ಲೇ ಇರುವ ಹಿಡಕಲ್‌ ಜಲಾಶಯದ ಮೊರೆ ಹೋಗಿದೆ. ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆದೇಶದಂತೆ ಕೃಷ್ಣಾ ನದಿ ತೀರದ ಜನರ ಕುಡಿಯುವ ನೀರಿನ ದಾಹ ತಣಿಸಲು ಹಿಡಕಲ್‌ ಜಲಾಶಯದಿಂದ 94 ಕಿ.ಮೀ.ದೂರದ ಕೃಷ್ಣೆಗೆ ಸೋಮವಾರದಿಂದ ನೀರು ಹರಿಸಲಾಗುತ್ತಿದೆ.

ಹಿಡಕಲ್‌ ಜಲಾಶಯದ ನೀರನ್ನು ಕೃಷ್ಣಾ ನದಿಗೆ ಹರಿಸುವ ನಿರ್ಧಾರ ಇದೇ ಮೊದಲು. ಸೋಮವಾರದಿಂದ ಪ್ರತಿದಿನ ಸುಮಾರು ಒಂದು ಸಾವಿರ ಕ್ಯುಸೆಕ್‌ನಂತೆ 11 ದಿನಗಳ ಕಾಲ ಪೊಲೀಸ್‌ ರಕ್ಷಣೆಯಲ್ಲಿ ಒಂದು ಟಿಎಂಸಿ ನೀರು ಬಿಡಲಾಗುತ್ತದೆ. ರೈತರು ಈ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಎಂಬ ಉದ್ದೇಶದಿಂದ ಹೆಸ್ಕಾಂನವರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲು ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next