Advertisement

ಸ್ವ-ಇಚ್ಛೆಯಿಂದ ಪರಿಸರ ಉಳಿವಿಗೆ ಮುಂದಾಗಿ

01:32 PM Jun 05, 2020 | mahesh |

ಹಸುರೇ ಉಸಿರು, ಜೀವಿಗಳು ಬದುಕಬೇಕಾದರೆ ಗಾಳಿ ಅತಿ ಮುಖ್ಯ. ವಸತಿ, ಗಾಳಿ, ಆಹಾರ.. ಹೀಗೆ ಪ್ರತಿಯೊಂದು ಹಂತದಲ್ಲೂ ನಾವು ಪ್ರಕೃತಿಯ ದಾಸರೇ. ನಮ್ಮ ಸ್ವಾರ್ಥಕ್ಕಾಗಿ ಪ್ರಕೃತಿಯನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತೇವೆ. ಪ್ರಕೃತಿ ಮಾತೆಯ ಮೇಲೆ ಮಿತಿ ಮೀರಿದ ಅನಾಚಾರಗಳನ್ನು ಎಸಗುತ್ತೇವೆ. ಒಂದೆಡೆ ಪ್ರಕೃತಿಯ ಸಂರಕ್ಷಣೆಯ ಜಪ, ಇನ್ನೊಂದೆಡೆ ಪ್ರಕೃತಿಯ ವಿನಾಶ ನಿರಂತರವಾಗಿ ನಮ್ಮಿಂದಲೇ ನಡೆಯುತ್ತಿದೆ.

Advertisement

ಬುದ್ಧಿವಂತ ಮಾನವರೇ ಪರಿಸರವನ್ನು ನಾಶಗೈಯ್ಯುತ್ತಿರುವುದು ವಿಷಾದನೀಯ. ವರ್ಷಕ್ಕೊಮ್ಮೆ ಬರುವ ವನಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮದ ಬಗೆಗೆ ಒಂದಷ್ಟು ಭಾಷಣಗಳನ್ನು ಬಿಗಿಯುವುದಕ್ಕಷ್ಟೇ ಸೀಮಿತಗೊಳಿಸಿ ಗಿಡಗಳನ್ನು ನೆಟ್ಟು ತೆರಳಿದರೆಂದರೆ ಮತ್ತೆ ಅದೇ ಸ್ಥಳದಲ್ಲಿ ಮುಂದಿನ ವರ್ಷ ಗಿಡ ನೆಡುತ್ತಾರೆ. ಇಲ್ಲಿಗೆ ನಮ್ಮ ಪರಿಸರ ಸಂರಕ್ಷಣೆ ಕಾರ್ಯ ಮುಗಿಯುತ್ತದೆ. ಭೂಕಂಪ, ಸುನಾಮಿ, ಪ್ರವಾಹ, ಜ್ವಾಲಾಮುಖೀ, ಕಾಳ್ಗಿಚ್ಚಿನಂಥ ಪ್ರಕೃತಿ ವಿಕೋಪಗಳು ಮಾತ್ರವಲ್ಲದೆ ಹೊಸ ಹೊಸ ರೋಗಗಳು ಮಾನವನ ಜೀವನಕ್ಕೆ ಮಾರಕವಾಗಿರುವುದು ಪರಿಸರದ ನಾಶದಿಂದಲೇ ಎಂಬುದನ್ನು ನಾವು ಮನಗಾಣಬೇಕು. ಪರಿಸರ ಪ್ರೀತಿ ತೋರಿಕೆಗೆ ಸೀಮಿತವಾಗಿರದೆ ಪ್ಲಾಸ್ಟಿಕ್‌ ಬಳಕೆ ಕಡಿಮೆಗೊಳಿಸುವ ಜತೆಯಲ್ಲಿ ಎಲ್ಲೆಂದರಲ್ಲಿ ಎಸೆಯದೆ ಪರಿಸರ ಮಾಲಿನ್ಯ ನಿಯಂತ್ರಿಸಬೇಕು.

ಕಾರ್ಖಾನೆಗಳಿಂದ ಬಿಡುವ ವಿಷಾನಿಲ, ವಿಷಯುಕ್ತ ತ್ಯಾಜ್ಯ ನಿರ್ವಹಣೆ, ವಾಯುಮಾಲಿನ್ಯ, ಜಲಮಾಲಿನ್ಯವನ್ನು ಕಡಿಮೆಗೊಳಿಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಗಿಡ, ಮರ, ಪ್ರಾಣಿ, ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಸ್ವ ಇಚ್ಛೆಯಿಂದ ಪ್ರಕೃತಿಯ ಉಳಿವಿಗೆ ಹಾಗೂ ಮಾನವನ ಬದುಕಿಗೆ ಪರಿಸರ ರಕ್ಷಣೆ ಅತಿಮುಖ್ಯ.

-ಶರಣ್ಯ ಕೋಲ್ಚಾರ್‌
ಮಂಗಳೂರು ವಿವಿ, ಕೊಣಾಜೆ.

Advertisement

Udayavani is now on Telegram. Click here to join our channel and stay updated with the latest news.

Next