Advertisement

ಗೆಳೆಯನ ಅಗಲಿಕೆ ಅರಗಿಸಿಕೊಳ್ಳಲಾಗದ ನೋವಿನಲ್ಲಿ ಸ್ನೇಹಿತರು

07:26 AM Feb 16, 2019 | |

ಮಂಡ್ಯ: ತನ್ನ ವಿಶೇಷ ಗುಣದಿಂದಲೇ ಎಲ್ಲರ ಮೆಚ್ಚುಗೆ ಗಳಿಸಿದ್ದ ಯೋಧ ಗುರು ಅವರ ಅಗಲಿಕೆಯನ್ನು ಕುಟುಂಬದವರು ಮತ್ತು ಸ್ನೇಹಿತರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಗುರುವನ್ನು ಬಲಿ ತೆಗೆದುಕೊಂಡ ಉಗ್ರರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂಬ ಒತ್ತಾಯ ಮಾಡುತ್ತಿದ್ದಾರೆ.

Advertisement

ಗುರು ಪ್ರೀತಿ, ವಿಶ್ವಾಸ, ಆತ್ಮೀಯತೆಗೆ ಕಾಲೋನಿಯ ಜನರು ಮರುಳಾಗಿದ್ದರು. ಊರಿನ ತುಂಬೆಲ್ಲಾ ಇವನನ್ನು ಪ್ರೀತಿಸುವ ಜನರಿದ್ದರು, ಆತ್ಮೀಯ ಗೆಳೆಯರೂ ಇದ್ದರು. ಅವರ್ಯಾರು ಗುರು ಉಗ್ರರ ದಾಳಿಗೆ ಬಲಿಯಾಗಿರುವುದನ್ನು ಈಗಲೂ ನಂಬುವ ಸ್ಥಿತಿಯಲ್ಲಿಲ್ಲ.

ಗುರುವಾರ ಸಂಜೆ ಉಗ್ರರ ದಾಳಿಗೆ ಯೋಧರು ವೀರ ಮರಣವನ್ನಪ್ಪಿದ್ದಾರೆಂಬ ಮಾಹಿತಿ ಪ್ರಸಾರವಾಗುತ್ತಿದ್ದಂತೆ ಅದಾಗಲೇ ಗುಡಿಗೆರೆ ಕಾಲೋನಿಯೊಳಗೆ ಆತಂಕ ಮಡುಗಟ್ಟಿತ್ತು. ಆದರೆ, ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿರಲಿಲ್ಲ. ಬಳಿಕ ಒಬ್ಬರಿಂದ ಒಬ್ಬೊಬ್ಬರಿಗೆ ವಿಷಯ ಹರಡಿ ಕುಟುಂಬದವರಿಗೂ ಮಾಹಿತಿ ಸಿಕ್ಕಿದ ಕೂಡಲೇ ಕಾಲೋನಿಯ ವಾತಾವರಣವೇ ಬದಲಾಯಿತು. ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದ ಮನೆಯವರೆಲ್ಲ ಗುರು ಅವರ ಮನೆ ಎದುರು ಜಮಾಯಿಸಿದ್ದರು.

ಈ ವೇಳೆಗೆ ವಿಷಯವನ್ನು ಗುರು ವೀರ ಮರಣದ ಸುದ್ದಿ ತಿಳಿದು ಸಹೋದರರು, ತಂದೆ, ತಾಯಿಯ ಆಕ್ರಂದನ ಮುಗಿಲುಮುಟ್ಟಿತ್ತು. ಇವರ ರೋಧನೆ ಕಂಡು ಸ್ಥಳದಲ್ಲಿದ್ದವರ ಕಣ್ಣಾಲಿಗಳೂ ಒದ್ದೆಯಾದವು. ಇನ್ನು ಪತ್ನಿಗೆ ಸುಮಾರು ಸಮಯ ಮಾಹಿತಿ ನೀಡಿರಲಿಲ್ಲ. ಬಳಿಕ ಸಮಾಧಾನಪಡಿಸಿ ಗುಡಿಗೆರೆ ಕಾಲೋನಿಗೆ ಕರೆದುಕೊಂಡು ಬರಲಾಯಿತು.  

ತಂದೆಯ ರೋದನ: ಮಗನನ್ನು ಕೊಂದವರಿಗೆ ಘೋರ ಶಿಕ್ಷೆಯಾಗಬೇಕು. ನಿನ್ನೆ ರಾತ್ರಿ ನನ್ನ ಮಗನ ಜತೆ ಫೋನ್‌ನಲ್ಲಿ ಮಾತನಾಡಿ¨ªೆ. ಮಗನಿಗಾಗಿ ಹೊಸ ಮನೆ ಕಟ್ಟಿಸಿ, ಈಗಷ್ಟೇ ಮದುವೆ ಮಾಡಿದ್ದೆ. ಆದ್ರೆ, ಈಗ ನನ್ನ ಮಗ ನಮ್ಮ ಜತೆಯಿಲ್ಲ. ನನ್ನ ಮಗ ಎಲ್ಲರ ಮೇಲೂ ಪ್ರೀತಿ ಇಟ್ಟುಕೊಂಡಿದ್ದ. ಅವನನ್ನ ಕೊಂದ ದುಷ್ಟರನ್ನು ಬಿಡಬಾರದು ಎಂದು ಗುರು ತಂದೆ ಹೊನ್ನಯ್ಯ ಕಣ್ಣೀರಾದರು. 

Advertisement

ಪ್ರೀತಿಯ ಕರಿಯ: ಹುತಾತ್ಮ ಯೋಧ ಗುರುವನ್ನು ಪ್ರೀತಿಯಿಂದ ಕರಿಯ ಎಂದು ಸ್ನೇಹಿತರು ಕರೆಯುತ್ತಿದ್ದರು. ಜತೆಯಲ್ಲಿ ಟ್ರೈನಿಂಗ್‌ ಮಾಡಿದ ಮತ್ತು ಕೆಲಸ ಮಾಡುತ್ತಿದ್ದ ಗೆಳೆಯರು ಕರಿಯ ಎಂದು ಕರೆಯುತ್ತಿದ್ದರು. ಆದರೆ, ಏನೇ ತಮಾಷೆ ಮಾಡಿದ್ರು ನಗುತ್ತಲೇ ಮಾತನಾಡುತ್ತಿದ್ದರು.  

ಚುರುಕಿನ ಗುರು: ಗೆಳೆಯನ ಬಗ್ಗೆ ಮಾತನಾಡಿದ ಮತ್ತೂಬ್ಬ ಸಿಆರ್‌ಪಿಎಫ್ ಯೋಧ ಮಹದೇವ್‌, ಗುರು ತುಂಬಾ ಚುರುಕಿನವನಾಗಿದ್ದನು. ಆಟೋಟ ಎಲ್ಲದ್ದರಲ್ಲೂ ಮುಂದಿದ್ದ, ಬೆಂಗಳೂರಿನ ತರಾಳು ಟ್ರೈನಿಂಗ್‌ ಸೆಂಟರ್‌ನಲ್ಲಿ ಒಟ್ಟಿಗೆ ತರಬೇತಿ ಮುಗಿಸಿದ್ದೆವು. ಆದ್ರೆ ಇದೀಗ ಗುರು ಹುತಾತ್ಮರಾಗಿದ್ದು, ಇದಕ್ಕೆಲ್ಲ ತಕ್ಕ ಉತ್ತರ ಕೊಡುತ್ತೇವೆ ಎಂದು ಮೈಸೂರು ಮೂಲದ ಯೋಧ ಬಾವುಕರಾದರು.

ಫೋಟೋ, ಸೆಲ್ಫಿ ವಿಡಿಯೋ ವೈರಲ್‌: ಇನ್ನು ಗುರು, ಕರ್ತವ್ಯದಲ್ಲಿದ್ದ ವೇಳೆ ತೆಗೆಸಿಕೊಂಡಿದ್ದ ಪೋಟೋ ಮತ್ತು ಸೆಲ್ಫಿ ವಿಡಿಯೋಗಳನ್ನು ಕಂಡು ಕುಟುಂಬದವರು, ಸ್ನೇಹಿತರು ಕಣ್ಣೀರು ಹಾಕುತ್ತಿರುವ ದೃಶ್ಯ ಕಂಡುಬಂದಿತು. ಇನ್ನು ಕೆಲ ದಿನದ ಹಿಂದೆ ಗುರು ಜಮ್ಮುವಿನಿಂದ ಸೆಲ್ಫಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ  ವೈರಲ್‌ ಆಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next