Advertisement

ಸೌಹಾರ್ದ ರಾಲಿಗೆ  ಸಿಪಿಎಂ ಬೆಂಬಲ

12:58 PM Feb 23, 2017 | Team Udayavani |

ಮಂಗಳೂರು: ಸಿಪಿಎಂ ಪಕ್ಷದ ದಕ್ಷಿಣ ಕನ್ನಡ  ಜಿಲ್ಲಾ ಸಮಿತಿ ಫೆ. 25ರಂದು ಕರಾವಳಿ ಜಿಲ್ಲೆಯ ಕೋಮು ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಆಯೋಜಿಸಲಾದ ರ್ಯಾಲಿಗೆ ಸಿಪಿಎಂ ಪೂರ್ಣ ಬೆಂಬಲ ನೀಡಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್‌ ಅವರು ತಿಳಿಸಿದ್ದಾರೆ. 

Advertisement

ಕೇರಳದ ಒಂದು ಭಾಗದಲ್ಲಿ ಸಂಘಪರಿವಾರಕ್ಕೆ ಸೇರಿದ ಹಿಂದೂಗಳ ಕೊಲೆಯಾಗುತ್ತಿದೆ ಎಂದು ಸಂಘ ಪರಿವಾರದವರು ಆರೋಪಿಸುತ್ತಿದ್ದಾರೆ. ಕೇರಳದ ಈ ಭಾಗದಲ್ಲಿ ಕೆಲವು ಸಮಯದಿಂದ ಕೊಲೆ ರಾಜಕಾರಣ ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯ. ಆದರೆ ಈ ಸಂಘಟನೆಗಳು ಹೇಳುವಂತೆ ಕೇವಲ ಹಿಂದೂ ಸಂಘಟನೆ ಸದಸ್ಯರ ಕೊಲೆ ಅಲ್ಲಿ ಆಗುತ್ತಿಲ್ಲ. ಕಮ್ಯೂನಿಸ್ಟ್‌ ಪಕ್ಷಗಳಿಗೆ ಸೇರಿದ ಅನೇಕರ ಕೊಲೆ ಅಲ್ಲಿ ನಡೆದಿದೆ. ಅವರಲ್ಲಿ ಹೆಚ್ಚಿನವರು ಹಿಂದೂಗಳಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next