Advertisement

ಲಕ್ಷ್ಮಿ ವಾರದಂದು ನಿಮ್ಮ ರಾಶಿಫಲ ಹೇಗೆದೆ ನೋಡಿ

07:12 AM May 14, 2021 | Team Udayavani |

ಮೇಷ: ಯಾವುದೇ ವಿಚಾರದಲ್ಲಿ ದುಡುಕು ವರ್ತನೆಗೆ ಕಾರಣರಾಗದಂತೆ ವರ್ತಿಸಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಮಿತ್ರ ಸಮೂಹದ ಆಕರ್ಷಣೆಗೆ ಒಳಗಾದಾರು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಸಂತಸ.

Advertisement

ವೃಷಭ: ಕೌಟುಂಬಿಕವಾಗಿ ಹಠಾತ್‌ ಏರಿಳಿತಗಳ ಅನುಭವವಾಗುತ್ತದೆ. ದೂರ ಸಂಚಾರದ ಅವಕಾಶ ಕಾರ್ಯಸಾಧನೆಗೆ ಅನುಕೂಲವಾದರೂ ಕಠಿಣ ಸನ್ನಿವೇಶವನ್ನು ಎದುರಿಸುವಂತಾಗುತ್ತದೆ. ಮನದನ್ನೆಯ ಸಹಕಾರ ನಿಮಗೊದಗಲಿದೆ.

ಮಿಥುನ: ಸಾಂಸಾರಿಕವಾಗಿ ಸಣ್ಣಪುಟ್ಟ ವಿಚಾರಗಳಲ್ಲಿ ಭಿನ್ನಾಭಿಪ್ರಾಯವು ಮೂಡಿಬಂದರೂ ಅದನ್ನು ನಿಮ್ಮೊಳಗೇ ಪರಿಹರಿಸಿಕೊಳ್ಳಿರಿ. ವೃತ್ತಿರಂಗದಲ್ಲಿ ಚೇತರಿಕೆಯು ಕಂಡು ಭಡ್ತಿಯು ದೊರಕಲಿದೆ. ಸಮಾಧಾನದ ವಾತಾವರಣ.

ಕರ್ಕ: ನಿರುದ್ಯೋಗಿ ಹಾಗೂ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಬೆಲೆ ಸಿಗಲಿದೆ. ಕ್ರಯ-ವಿಕ್ರಯಗಳು ಲಾಭಕರವಾಗಲಿದೆ. ಸಾಮಾಜಿಕರಂಗದಲ್ಲಿ ಹೊಸಬರ ಸಂಪರ್ಕ ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ಗೊಂದಲಗಳು ತಿಳಿಯಾಗಲಿದೆ.

ಸಿಂಹ:ಆರ್ಥಿಕವಾಗಿ ಧನದಾಹದ ಹೆಚ್ಚಳದಿಂದ ಏರುಪೇರು ಕಂಡುಬಂದೀತು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳಿಂದ ಕಿರಿಕಿರಿ ಕಂಡುಬಂದೀತು. ಕೆಲವೊಮ್ಮೆ ಅದೃಷ್ಟದ ಆಸರೆಯು ಗೋಚರಕ್ಕೆ ಬರುವುದು. ಧೈರ್ಯದ ಅಗತ್ಯವಿದೆ.

Advertisement

ಕನ್ಯಾ: ಆರ್ಥಿಕವಾಗಿ ನಿಮ್ಮ ಲೆಕ್ಕಾಚಾರವು ಸರಿಯಾಗಿರು ತ್ತದೆ. ಅದಕ್ಕೆ ಸರಿಯಾಗಿ ಖರ್ಚು ಮಾಡಿರಿ. ಕೌಟುಂಬಿಕವಾಗಿ ಸುಖಭಾಗ್ಯ ವರ್ಧನೆಯಿದೆ. ವೃತ್ತಿರಂಗದಲ್ಲಿ ಮನದೆಣಿಕೆಯಂತೆ ಕಾರ್ಯಸಾಧನೆ ತಂದೀತು. ಸಂತೃಪ್ತಿ ಇರುತ್ತದೆ.

ತುಲಾ: ಚಿನ್ನ , ಬೆಳ್ಳಿ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಈಗ ಉತ್ತಮ ಕಾಲವಲ್ಲ. ದೇವತಾರಾಧನೆಯಿಂದ ಮನೆಯಲ್ಲಿ ಶಾಂತಿಯಲ್ಲಿ ಸಮಾಧಾನ ನೆಲೆಸಲಿದೆ. ವಿದ್ಯಾರ್ಥಿ ಗಳ ಪ್ರಯತ್ನಬಲ ಸಾರ್ಥಕವಾದೀತು.

ವೃಶ್ಚಿಕ: ಗ್ರಹಗಳ ಪ್ರತಿಕೂಲದಿಂದ ಆದಾಯದಲ್ಲಿ ಕಂಡುಬಾರದಿದ್ದರೂ ಹೆಚ್ಚಿನ ಸಮಸ್ಯೆ ಇರಲಾರದು. ವ್ಯಾಪಾರ, ವ್ಯವಹಾರಗಳಲ್ಲಿ ಲಾಭಾಂಶ ಕಡಿಮೆ ಇದ್ದರೂ ನಷ್ಟವಿರದು. ಗೃಹಕೃತ್ಯದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚಾಗಲಿದೆ.

ಧನು: ಮನೆಯಲ್ಲಿ ಜವಾಬ್ದಾರಿಯು ಹೆಚ್ಚಿ ದೇಹಾಯಾಸಕ್ಕೆ ಕಾರಣವಾಗಲಿದೆ. ಜಾಗ್ರತೆ ವಹಿಸಬೇಕಾದೀತು. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗೊಂದಲಗಳು ಮೂಡಿಬಂದಾವು. ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಸಂತಸವಾಗಲಿದೆ.

ಮಕರ: ಹೊಸ ವಾಹನ, ಭೂಖರೀದಿಯು ನಡೆಯಬಹುದು. ವೈದ್ಯಕೀಯ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸದಿಂದ ಆಯಾಸ ತಲೆದೋರಲಿದೆ. ಆರೋಗ್ಯಭಾಗ್ಯದಲ್ಲಿ ಪಿತ್ತಪ್ರಕೋಪ ಕಂಡು ಬರುವುದು.

ಕುಂಭ: ಆರ್ಥಿಕವಾಗಿ ಹಂತಹಂತವಾಗಿ ಅಭಿವೃದ್ಧಿಯು ಕಂಡುಬರುವುದು. ಮಾತಿನಲ್ಲಿ ಕಡಿವಾಣವಿರಲಿ. ಎಲ್ಲಾ ವಿಚಾರದಲ್ಲಿ ದುಡುಕದೆ ಆಲೋಚಿಸಿ ಮುನ್ನಡೆಯಿರಿ. ಮನೆಯಲ್ಲಿ ಅಲಂಕಾರಿಕ ಸಾಮಾಗ್ರಿ ಬಂದೀತು.

ಮೀನ: ಅನಿರೀಕ್ಷಿತ ಉದ್ಯೋಗಲಾಭವಿರುತ್ತದೆ. ಹಿರಿಯರೊಡನೆ ಹಾಗೂ ಬಂಧುಗಳೊಂದಿಗೆ ಜಾಗ್ರತೆ ಯಿಂದ ವ್ಯವಹರಿಸಿರಿ. ಅತೀ ಕೆಲಸದಿಂದ ಮಾನಸಿಕವಾಗಿ ಶ್ರಮ ಹಾಗೂ ಶಾರೀರಿಕವಾಗಿ ಆಯಾಸ ಕಂಡುಬರುವುದು.

Advertisement

Udayavani is now on Telegram. Click here to join our channel and stay updated with the latest news.

Next