Advertisement

ಉಚಿತ ಟ್ಯಾಂಕರ್‌ ನೀರು ವಿತರಣೆ

08:14 PM May 19, 2019 | Sriram |

ಉಡುಪಿ: ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ “ಮನೆ-ಮನೆಗೆ ಉಚಿತ ಟ್ಯಾಂಕರ್‌ ನೀರು’ ವಿತರಣೆ ಕಾರ್ಯಕ್ರಮಕ್ಕೆ ರವಿವಾರ ಶಾಸಕ ರಘುಪತಿ ಭಟ್‌ ಚಾಲನೆ ನೀಡಿ ಮಾತನಾಡಿದ ಅವರು ಸಮಿತಿಯು ನಗರದ ಜನತೆಗೆ ನಿತ್ಯ ನೀರು ಸಿಗುವಂತೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

Advertisement

ಸಮಿತಿ ಅಧ್ಯಕ್ಷ ಪಿ. ವಸಂತ ಭಟ್‌ ಮಾತನಾಡಿ, ಮನೆಗಳಿಗೆ ಉಚಿತ ಟ್ಯಾಂಕರ್‌ ನೀರು ವ್ಯವಸ್ಥೆ ನಗರಸಭೆಯಿಂದ
24×7 ನಳ್ಳಿ ನೀರು ಬರುವವರೆಗೆ ನೀರು ವಿತರಿಸಲಾಗುತ್ತದೆ ಎಂದರು.

ಸಮಿತಿ ಸದಸ್ಯರಾದ ಎಂ. ವಲ್ಲಭ ಭಟ್‌,ಸತೀಶ್‌ ಕುಲಾಲ್‌ ಕಡಿಯಾಳಿ ,ಮುರಳಿಧರ್‌ ಪೈ, ಕಾತ್ಯಾಯಿನಿ ನಗರ ಹರೀಶ್‌ ಕುಮಾರ್‌, ಸಂದೀಪ್‌ ಸುನಿಲ್‌ ಕಡಿಯಾಳಿ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಪಿ. ಸದಾನಂದ ಶರ್ಮ, ಮಂಜುನಾಥ್‌ ಹೆಬ್ಟಾರ್‌ ಉಪಸ್ಥಿತರಿದ್ದರು.

ಕಡಿಯಾಳಿ ನಗರಸಭಾ ಸದಸ್ಸೆ ಗೀತಾ ಶೇಟ್‌ ಸ್ವಾಗತಿಸಿ, ಮಹೇಶ್‌ ಕುಮಾರ್‌ ವಂದಿಸಿದರು. ಪ್ರ. ಕಾರ್ಯದರ್ಶಿ ಕೆ .ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next