Advertisement

37 ಸಾವಿರ ಕುಟುಂಬಗಳಿಗೆ ಉಚಿತ ಪಡಿತರ ಮಂಜೂರು

06:06 PM Apr 21, 2020 | Suhan S |

ಹೊನ್ನಾವರ: ತಾಲೂಕಿನ 37 ಸಾವಿರ ಬಿಪಿಎಲ್‌ ಮತ್ತು ಬಿಪಿಎಲ್‌ಗೆ ಕಾದಿದ್ದ 818 ಕುಟುಂಬಗಳಿಗೆ 10 ಕೆಜಿ ಅಕ್ಕಿ ಉಚಿತ ಪಡಿತರ ಮಂಜೂರಾಗಿದ್ದು, ಎಪಿಎಲ್‌ನವರು ನಿಗದಿತ ಮೊತ್ತ ಕೊಟ್ಟು ಪಡೆಯಬಹುದಾಗಿದೆ. ಇದಲ್ಲದೇ ಕೇಂದ್ರ ಸರ್ಕಾರದ ಪಡಿತರ ಮೂರು ತಿಂಗಳಿಗೆ 15 ಕಿಲೋ ಅಕ್ಕಿ ಮತ್ತು ಬೇಳೆ ಕೂಡ ಮಂಜೂರಾಗಿದ್ದು ಮೇ 1ರಿಂದ ಇವುಗಳ ವಿತರಣೆ ನಡೆಯಲಿದೆ.

Advertisement

ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಮತ್ತು ಕಾರ್ಡ್‌ ನಿರೀಕ್ಷೆಯಲ್ಲಿರುವವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಜೂರು ಮಾಡಿದ ಪಡಿತರ ವಿತರಣೆ ಮಾಡಲಾಗುವುದು. ಜೊತೆಗೆ ದಾನಿಗಳು, ಸಂಘ-ಸಂಸ್ಥೆಗಳು ಗ್ರಾಮೀಣ ಬಡವರಿಗೆ ಜೀವನಾವಶ್ಯಕ ಸಾಮಗ್ರಿ ಅಕ್ಕಿ, ಎಣ್ಣೆ, ಬೇಳೆ, ತರಕಾರಿಗಳನ್ನು ಉಚಿತವಾಗಿ ಹಂಚುವ ಕೆಲಸವನ್ನು ಮುಂದುವರಿಸಿದ್ದು, ತಾಲೂಕಿನಲ್ಲಿ ಆಹಾರದ ಸಮಸ್ಯೆ ಇಲ್ಲ, ಯಾರೂ ಉಪವಾಸ ಇಲ್ಲ ಎಂದು ತಹಶೀಲ್ದಾರ್‌ ವಿವೇಕ ಶೇಣ್ವಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next