Advertisement

ಪುಷ್ಪಗಳ ಲೋಕಕ್ಕೆಉಚಿತ ಪ್ರವೇಶ

03:11 PM Feb 01, 2020 | Suhan S |

ಶಿರಸಿ: ನೂರಾರು ಬಗೆಯ ಪುಷ್ಪಗಳು, ಫಲಗಳ ಅನಾವರಣ, ಮನ ತಣಿಸುವ ಚಿತ್ತಾಕರ್ಷಕ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನಕ್ಕೆ ಇಲ್ಲಿಯ ತೋಟಗಾರಿಕಾ ಇಲಾಖೆ ಆವಾರದಲ್ಲಿ ಭರದ ಸಿದ್ಧತೆಗಳು ನಡೆದಿದೆ.

Advertisement

ಫೆ.1 ರಿಂದ 4ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ 32 ಜಾತಿಯ 3ಲಕ್ಷಕ್ಕೂ ಹೆಚ್ಚು ಹೂಗಳ ಜೋಡಣೆ ಕಾರ್ಯ ಅಂತಿಮವಾಗಿ ಸಿದ್ಧವಾಗಿದೆ. ಫಲಪುಷ್ಪ ಪ್ರದರ್ಶನದಲ್ಲಿ ಕಲಾ ಕೃತಿಗಳ ತಯಾರಿಕೆಗೆ ಪಿಗೊನಿಯಾ, ಮೆರಿಗೊಲ್ಡ್‌, ಪಿಂಕ್ಸ್‌, ಪುಷ ಪೆಂಟಾಸ್‌, ಸಾಲ್ವಿಯಾ ಹಾಗೂ ಎಲ್ಲ ಜಾತಿಯ ಸೇವಂತಿಗೆಗಳು ನಳಿಸಲಿವೆ. ಸರ್ವಧರ್ಮ ಸಮನ್ವಯತೆ ಸಾರುವ ಕಮಲ್‌ ಮಹಲ್‌ ಮಾದರಿಯನ್ನು ಸುಮಾರು 1ಲಕ್ಷ ರೂ.ಗೂ ಅಧಿ ಕ ಮೊತ್ತದ ಹೂವುಗಳಿಂದ, ಅಡಕೆ, ಅನಾನಸ್‌ ಮಂಟಪ, ಜಿಲ್ಲೆಯಲ್ಲಿರುವ ಪಕ್ಷಿ ಸಂಕುಲಗಳು, ಚಂದ್ರಯಾನ 3 ರಾಕೆಟ್‌ ಹೂವಿನಿಂದ ಸಿದ್ಧಪಡಿಸಲಾಗಿದೆ.

ವರ್ಟಿಕಲ್‌ ಗಾರ್ಡನ್‌ ಮಾದರಿಗಳು, ತರಕಾರಿ ಕೆತ್ತನೆ, ಮಾದರಿ ತರಕಾರಿ ಪ್ರಾತ್ಯಕ್ಷಿಕೆಗಳು, ವಿವಿಧ ಉದ್ಯಾನವನ ಮಾದರಿ, ವಿವಿಧ ಜಾತಿಯ ಹೂವುಗಳ ಜೋಡಣೆ ವಿಶೇಷತೆ ಫಲಪುಷ್ಪ ಪ್ರದರ್ಶನ ಒಳಗೊಂಡಿದೆ. 20 ಅಡಿ ಉದ್ದ ಹಾಗೂ 20 ಅಡಿ ಅಗಲದ ಪುಷ್ಪ ರಂಗೋಲಿ ಅನಾವರಣಗೊಳ್ಳಲಿದೆ. ರಂಗೋಲಿಯಲ್ಲಿ ಅರಳಿಸುವ ಮೂಲಕ ಪೇಜಾವರ ಮಠದ ದಿ. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಗೌರವಾರ್ಪಣೆ ಕೂಡ ನಡೆಯಲಿದೆ. ವಿವಿಧ ಜಾತಿಯ ಹೂವುಗಳು ಪಾಟ್‌ಗಳಲ್ಲಿ, ಮಡಿಗಳಲ್ಲಿ ಅರಳಿನಿಂತಿವೆ. ಹಾಗೇ ತರಕಾರಿ ಗಿಡಗಳು ಫಲ ನೀಡಿ ನಳನಳಿಸಿ ಪುಷ್ಪ ಪ್ರೇಮಿಗಳ ಗಮನ ಸೆಳೆಯಲಿದೆ.

ಇಲಾಖೆ ಆವಾರದಲ್ಲಿ 70ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದ್ದು ಕೃಷಿ ಮತ್ತು ತೋಟಗಾರಿಕಾ ಬೆಳಗಳಲ್ಲಿ ಉಪಯೋಗವಾಗುವ ಯಂತ್ರೋಪಕರಣಗಳ ಪ್ರದರ್ಶನ, ಕೀಟ ಮತ್ತು ರೋಗಗಳ ನಿಯಂತ್ರಣಕ್ಕೆ ಸಾವಯವ ಉತ್ಪನ್ನಗಳ ಬಳಕೆ, ಸಸ್ಯಾಗಾರಗಳ ಮಳಿಗೆ, ಸಂಸ್ಕರಿಸಿದ ಪದಾರ್ಥಗಳ ಮಳಿಗೆ, ಕೃಷಿ ಸಂಬಂಧಿತ ಇಲಾಖೆಗಳ ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶಿಕೆಗಳನ್ನು ಪ್ರದರ್ಶಿಸಿ ರೈತರಿಗೆ ಸೂಕ್ತ ಮಾಹಿತಿ ನೀಡಲು ಸಿದ್ಧತೆಗಳು ನಡೆದಿವೆ.

ಫೆ.1ರ ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಶಿವರಾಮ್‌ ಹೆಬ್ಟಾರ್‌ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಪುಷ್ಪ ಸಂಭ್ರಮ ಅನೇಕ ಸಸ್ಯ ಪ್ರಿಯರಿಗೆ ಇನ್ನಷ್ಟು ಪ್ರೇರಣೆ ಉಂಟಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next