Advertisement

ಮಂಗಳೂರು: ಸಾಲ ಪಡೆದ ಮಹಿಳೆಗೆ 2.45 ಲ.ರೂ. ವಂಚನೆ

06:38 PM Oct 13, 2022 | Team Udayavani |

ಮಂಗಳೂರು: ಸಾಲ ಪಡೆಯುವ ಸಂದರ್ಭದಲ್ಲಿ ನೀಡಿದ ಖಾಲಿ ಚೆಕ್‌ಗಳ ಮೂಲಕ ಹಣ ಪಡೆದು ಮಹಿಳೆಗೆ 2,45,500 ರೂ. ವಂಚಿಸಿರುವ ಬಗ್ಗೆ ಮಂಗಳೂರು ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶಿಲ್ಪಾ ಪೂಂಜಾ ಅವರು ಜೆಪ್ಪು ಶಾಂತಿನಗರದ ಮಂಗಳೂರು ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಸಾಲ ಪಡೆಯುವ ಸಂದರ್ಭ ಅವರ ಖಾತೆ ಇರುವ ಐಡಿಬಿಐ ಬ್ಯಾಂಕ್‌ನ ಖಾಲಿ ಚೆಕ್‌ಗಳನ್ನು ನೀಡಿದ್ದರು. ಸೊಸೈಟಿಯ ವ್ಯವಸ್ಥಾಪಕ ಮತ್ತು ಇತರ ಮೂವರು ಸೇರಿಕೊಂಡು ಆ ಚೆಕ್‌ಗಳ ಮೂಲಕ ಹಣ ವಿದ್‌ಡ್ರಾ ಮಾಡಿದ್ದಾರೆ.

ಆರೋಪಿಗಳಾದ ಪ್ರಜ್ವಲ್‌ ಜೋಯೆಲ್‌ ಫೆರ್ನಾಂಡಿಸ್‌ ಹೆಸರಿನಲ್ಲಿ ಒಂದು ಚೆಕ್‌ ಮೂಲಕ 50,000 ರೂ., ರತನ್‌ ಕುಮಾರ್‌ ಕೆ. ಹೆಸರಿನಲ್ಲಿ ಒಂದು ಚೆಕ್‌ ಮೂಲಕ 99,000 ರೂ., ಅಶ್ರಫ್ ಅಬ್ದುಲ್‌ ಖಾದರ್‌ ಹೆಸರಿನಲ್ಲಿ ಒಂದು ಚೆಕ್‌ ಮೂಲಕ 96,500 ರೂ. ವಿತ್ ಡ್ರಾ ಮಾಡಿ ವಂಚಿಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next