Advertisement

Fraud: ಮುದ್ರಾ ಲೋನ್‌ ನೆಪದಲ್ಲಿ ಲಕ್ಷಾಂತರ ರೂ.ವಂಚನೆ

09:25 PM Apr 06, 2023 | Team Udayavani |

ಉಡುಪಿ: ಮುದ್ರಾ ಲೋನ್‌ ನೆಪದಲ್ಲಿ ವ್ಯಕ್ತಿಯೋರ್ವರಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.

Advertisement

ಕಾರ್ಕಳದ ಸುರೇಶ್‌ ಅವರಿಗೆ ಫೆ.23ರಂದು ಮುದ್ರಾ ಲೋನ್‌ ಬಗ್ಗೆ ಮೇಸೆಜ್‌ ಬಂದಿದ್ದು, ಅದರಲ್ಲಿ ನಮೂದಿಸಿದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ನಿಮಗೆ 50,00,000ರೂ. ಮುದ್ರಾ ಲೋನ್‌ ದೊರೆತಿರುವುದಾಗಿ ತಿಳಿಸಿ ಪೇಪರ್‌ ಚಾರ್ಜ್‌ , ಇನ್ಸೂರೆನ್ಸ್‌, ಮುಗಂಡ ಹಣ ಮುಂತಾದ ಚಾರ್ಜ್‌ಗಳನ್ನು ಪಾವತಿಸಬೇಕೆಂದು ಆರೋಪಿಗಳು ತಿಳಿಸಿದ್ದರು. ಅದರಂತೆ ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ಸುರೇಶ್‌ ಅವರು ಹಂತ ಹಂತವಾಗಿ ಒಟ್ಟು 1,30,900ರೂ. ಪಾವತಿಸಿದ್ದು ಮುದ್ರಾ ಲೋನ್‌ ನೀಡದೇ, ಪಡೆದ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿದ್ದಾರೆ. ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next