Advertisement

Fraud: ಬ್ಯಾಂಕ್‌ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ವಂಚನೆ

09:28 PM Apr 06, 2023 | Team Udayavani |

ಉಡುಪಿ: ಬ್ಯಾಂಕ್‌ ಅಧಿಕಾರಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.

Advertisement

ಬೆಳ್ಮಣ್ಣುವಿನ ಬಾಲಕೃಷ್ಣ ಶೆಣೈ ಪಿ.ಅವರು ಮುದರಂಗಡಿ ಕೆನರಾ ಬ್ಯಾಂಕ್‌ನಲ್ಲಿ ಎಸ್‌.ಬಿ. ಖಾತೆ ಹೊಂದಿದ್ದು, ಎ.5ರಂದು ಅವರ ಮೊಬೈಲ್‌ ಸಂಖ್ಯೆಗೆ ಕೆವೈಸಿ ಅಪ್‌ಡೇಟ್‌ ಮಾಡುವ ಬಗ್ಗೆ ಸಂದೇಶ ಬಂದಿತ್ತು. ಆ ಸಂಖ್ಯೆಗೆ ಕರೆ ಮಾಡಿದಾಗ ತಾನು ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ, ಬ್ಯಾಂಕ್‌ ಖಾತೆ, ಎ.ಟಿ.ಎಂ. ಕಾರ್ಡ್‌, ಸಿ.ವಿ.ವಿ. ವಿವರ ಹಾಗೂ ಮೊಬೈಲ್‌ಗೆ ಬಂದಿರುವ ಓಟಿಪಿ ಪಡೆದಿದ್ದರು. ಅದೇ ದಿನ ಬಾಲಕೃಷ್ಣ ಶೆಣೈಯವರ ಖಾತೆಯಿಂದ 1,98,221ರೂ. ಆನ್‌ಲೈನ್‌ ಮೂಲಕ ವರ್ಗಾವಣೆಗೊಂಡಿದೆ. ಸೆನ್‌ ಅಪರಾಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next