Advertisement

ಎಸಿಬಿ ಸೋಗಿನಲ್ಲಿ ಬೆಸ್ಕಾಂ ಅಧಿಕಾರಿಗೆ ವಂಚನೆ

01:10 PM Apr 16, 2022 | Team Udayavani |

ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿ ಎಂದು ತುಮಕೂರು ಬೆಸ್ಕಾಂ ಕಚೇರಿಯ ಅಧೀಕ್ಷಕ ಅಭಿಯಂತರರಿಗೆ ಕರೆ ಮಾಡಿದ ದುಷ್ಕರ್ಮಿಗಳು ದಾಳಿ ಮಾಡುವುದಾಗಿ ಬೆದರಿಸಿ 1.50 ಲಕ್ಷ ರೂ. ಪಡೆದು ವಂಚಿಸಿದ್ದಾರೆ.

Advertisement

ಈ ಸಂಬಂಧ ತುಮಕೂರು ಬೆಸ್ಕಾಂ ಕಚೇರಿಯ ಅಧೀಕ್ಷಕ ಅಭಿಯಂತರ ಗುರುಸ್ವಾಮಿ (59) ಅವರು ಕೊಟ್ಟ ದೂರಿನ ಆಧಾರದ ಮೇಲೆ ಹೈಗ್ರೌಂಡ್ಸ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಾ.31ರಂದು ಅಪರಿಚಿತ ಮೊಬೈಲ್‌ ನಂಬರ್‌ನಿಂದ ಗುರುಸ್ವಾಮಿಗೆ ಕರೆ ಬಂದಿದ್ದು, ಆ ವ್ಯಕ್ತಿ ತಾನು ಬೆಂಗಳೂರು ಎಸಿಬಿ ಕಚೇರಿಯ ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡಿದ್ದ. ಶೀಘ್ರದಲ್ಲೇ ಎಸಿಬಿ ಅಧಿಕಾರಿಗಳು ನಿಮ್ಮ ವಿರುದ್ಧ ಪ್ರಕರಣ ದಾಖಲಿ, ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡುವ ಸಾಧ್ಯತೆಗಳಿವೆ. 1.50 ಲಕ್ಷ ರೂ. ಅನ್ನು ನಾನು ಹೇಳಿದ ಬ್ಯಾಂಕ್‌ ಖಾತೆಗೆ ಬೆಳಗ್ಗೆ 11.30ರೊಳಗೆ ವರ್ಗಾವಣೆ ಮಾಡಿದರೆ. ಎಸಿಬಿ ದಾಳಿ ತಪ್ಪಿಸುವುದಾಗಿ ಹೇಳಿದ್ದ.

ಕರೆ ಮಾಡಿರುವುದು ಎಸಿಬಿ ಡಿವೈಎಸ್‌ಪಿ ಎಂದು ಭಾವಿಸಿದ್ದ ಗುರುಸ್ವಾಮಿ, ಸ್ನೇಹಿತನ ಮೂಲಕ ಆರೋಪಿ ಸೂಚಿಸಿದ ಖಾತೆಗೆ 1.5 ಲಕ್ಷ ಜಮೆ ಮಾಡಿಸಿದ್ದರು. ಮತ್ತೆ ಕರೆ ಮಾಡಿ 50 ಸಾವಿರ ರೂ.ಗೆ ಬೇಡಿಕೆ ಇಟ್ಟಾಗ, ಅನುಮಾನಗೊಂಡು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next