Advertisement

Manipal ಷೇರು ಹೂಡಿಕೆ ಹೆಸರಲ್ಲಿ ವಂಚನೆ: ದೂರು ದಾಖಲು

11:09 PM Jul 04, 2024 | Team Udayavani |

ಮಣಿಪಾಲ: ಆನ್‌ಲೈನ್‌ನಲ್ಲಿ ಷೇರು ಮಾರುಕಟ್ಟೆ ಹೂಡಿಕೆ ಬಗ್ಗೆ ನಕಲಿ ಜಾಹೀರಾತು ಮೂಲಕ ಗಮನ ಸೆಳೆದು ಹಣ ಹೂಡಿಕೆ ಮಾಡಿಸಿ ವಂಚನೆ ಮಾಡಲಾಗಿದೆ ಎಂದು ಮಣಿಪಾಲ ವ್ಯಕ್ತಿ ದೂರು ದಾಖಲಿಸಿದ್ದಾರೆ.

Advertisement

ಶೇರ್‌ಖಾನ್‌ ಇನ್‌ವೆಸ್ಟ್‌ ಮೆಂಟ್‌ ಕ್ಲಬ್‌ ಸಾಂಸ್ಥಿಕ ಷೇರು ವಹಿವಾಟು ಬಗ್ಗೆ ಜಾಹೀರಾತು ನೋಡಿದ ಮಣಿಪಾಲ ನಿವಾಸಿ ಪ್ರೇಮಾನಂದ (61) ಅವರು ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಸದಸ್ಯತ್ವ ಪಡೆದುಕೊಂಡಿದ್ದಾರೆ.

ಆರಂಭದಲ್ಲಿ 1 ಲಕ್ಷ ರೂ. ಅವರ ವರ್ಗಾವಣೆ ಮಾಡಿದ್ದು, ಕ್ರಮೇಣ ಇನ್ನಷ್ಟು ಹೂಡಿಕೆಯೊಂದಿಗೆ 4.99 ಲಕ್ಷ ರೂ. ಒಟ್ಟು ಹೂಡಿಕೆ ಮಾಡಿದ್ದಾರೆ.

ಈ ಹೂಡಿಕೆಗೆ 4.60 ಲಕ್ಷ ರೂ. ಲಾಭಾಂಶ ತೋರಿಸಿ, 42 ಲಕ್ಷ ರೂ ಷೇರು ಹಂಚಿಕೆ ಮಾಡಿ, 32 ಲಕ್ಷ ರೂ. ಪಾವತಿಸುವಂತೆ ಆರೋಪಿಗಳು ಸೂಚಿಸಿದ್ದಾರೆ. ಇದರಿಂದ ಅನುಮಾನಗೊಂಡ ಪ್ರೇಮಾನಂದ ಅವರು ಉಡುಪಿಗೆ ಶೇರ್‌ಖಾನ್‌ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಇದು ತಮ್ಮ ಸಂಸ್ಥೆಯ ಹೆಸರಲ್ಲಿರುವ ನಕಲಿ ಸಂಸ್ಥೆ ಎಂದು ಅಲ್ಲಿನ ಪ್ರತಿನಿಧಿಗಳು ತಿಳಿಸಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next