Advertisement

Fraud Case ಹಣ ಪಡೆದು, ಟ್ರ್ಯಾಕ್ಟರ್‌ ನೀಡದೆ ವಂಚನೆ

10:44 PM Feb 14, 2024 | Team Udayavani |

ಕುಂದಾಪುರ: ಕೋಟೇಶ್ವರದ ಶೋರೂಂ ಒಂದರಲ್ಲಿ ಶ್ರೀಕಾಂತ್‌ ಎಂಬಾತ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಟ್ರ್ಯಾಕ್ಟರ್‌ ನೀಡದೆ ವಂಚಿಸಿರುವುದಾಗಿ ಚಂದ್ರ ಮಂದಾರ್ತಿ ಅವರು ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

2022ರ ಅ. 11ರಂದು ಶೋರೂಂನಲ್ಲಿ 9.60 ಲಕ್ಷ ರೂ. ವೆಚ್ಚದ ಟ್ರ್ಯಾಕ್ಟರ್‌ ಖರೀದಿಗೆ ತೆರಳಿದ್ದು, ಆ ವೇಳೆ 2 ಲಕ್ಷ ರೂ. ನಗದು ರೂಪದಲ್ಲಿ ಮುಖ್ಯಸ್ಥ ಶ್ರೀಕಾಂತ್‌ಗೆ ಕೊಟ್ಟಿದ್ದು, ಉಳಿದ ಮೊತ್ತಕ್ಕೆ ಉಡುಪಿಯ ಎಚ್‌ಡಿಬಿ ಫೈನಾನ್ಸ್‌ ನಿಂದ 6.15 ಲ.ರೂ. ಸಾಲ ನೀಡಿದ್ದು, ಅದನ್ನು ಈ ಸಂಸ್ಥೆಗೆ ನೀಡಲಾಗಿತ್ತು. ವಾರದ ಅನಂತರ ವಿಚಾರಿಸಿದಾಗ ಇನ್ನೊಂದು ವಾರದೊಳಗೆ ಟ್ರ್ಯಾಕ್ಟರ್‌ ಬರಲಿದ್ದು, ದೂರವಾಣಿ ಕರೆ ಮಾಡಿ ತಿಳಿಸಲಾಗುವುದು ಎಂದು ಹೇಳಿದ್ದಾರೆ.

ಒಂದು ತಿಂಗಳಾದರೂ ಟ್ರ್ಯಾಕ್ಟರ್‌ ನೀಡಿಲ್ಲ. ಈಗ ನೋಡಿದಾಗ ಕಳೆದ 6 ತಿಂಗಳಿನಿಂದ ಈ ಸಂಸ್ಥೆ ಬಾಗಿಲು ಮುಚ್ಚಿದೆ ಎಂದು ಚಂದ್ರ ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next