Advertisement

Fraud Case: ಸಾಲ ಮಂಜೂರಾತಿ ಹೆಸರಲ್ಲಿ ಯುವಕನಿಗೆ 75 ಸಾವಿರ ರೂ. ವಂಚನೆ

06:13 PM Jun 02, 2024 | Team Udayavani |

ಮಂಡ್ಯ: ಸಾಲ ಮಂಜೂರಾತಿ ಹೆಸರಿನಲ್ಲಿ ಯುವಕನೊಬ್ಬನಿಂದ 75 ಸಾವಿರ ರೂ.ಗಳನ್ನು ಆನ್‌ಲೈನ್‌ ಮೂಲಕ ಪಡೆದು ವಂಚಿಸಿರುವ ಘಟನೆ ಮಳವಳ್ಳಿ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಮಳವಳ್ಳಿ ತಾಲ್ಲೂಕಿನ ಮೊಳೇದೊಡ್ಡಿ ಗ್ರಾಮದ ಜಿ.ಎಸ್.ಶಿವಕುಮಾರ್ ವಂಚನೆಗೊಳಗಿರುವ ಯುವಕ. ಎರಡು ದಿನಗಳ ಹಿಂದೆ ಮೊ.8276916158 ಮತ್ತು 8981345726 ನಂಬರ್ ಗಳಿಂದ ಶಿವಕುಮಾರ್ ಅವರಿಗೆ ಮನೋಜ್ ರೆಡ್ಡಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ನಿಮಗೆ 2 ಲಕ್ಷ ಸಾಲ ಮಂಜೂರಾಗಿದೆ. ನೀವು ಸ್ಪಲ್ಪ ಹಣ ಪಾವತಿ ಮಾಡಬೇಕು ಎಂದು 5000, 2000, 7500, 25500, 11838 ರೂ.ಸೇರಿದಂತೆ ಅನೇಕ ಬಾರಿ ಹಂತ ಹಂತವಾಗಿ ಸುಮಾರು 75000 ರೂ.ಗಳನ್ನು ಆನ್ ಲೈನ್ ಮೂಲಕ ಪಾವತಿ ಮಾಡಿಸಿಕೊಂಡಿದ್ದಾರೆ. ನಂತರ ಮತ್ತಷ್ಟು ಹಣ ಹಾಕುವಂತೆ ಒತ್ತಾಯಿಸಿದಾಗ ಅನುಮಾನಗೊಂಡು ಜಿ.ಎಸ್‌. ಶಿವಕುಮಾರ್ ಆ ನಂಬರ್ ಗಳಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ಶನಿವಾರ ದೂರು ನೀಡಿದ್ದಾರೆ.

ಇದನ್ನೂ ಓದಿ: Sindhanur: ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಸನಗೌಡ ಬಾದರ್ಲಿಗೆ ಎಂಎಲ್ಸಿ ಟಿಕೆಟ್

Advertisement

Udayavani is now on Telegram. Click here to join our channel and stay updated with the latest news.

Next