Advertisement

Hyderabad ಆಂಧ್ರಪ್ರದೇಶದ ತಿರುಮಲದಲ್ಲಿ ನಾಲ್ಕನೇ ಚಿರತೆ ಬಲೆಗೆ

08:10 PM Aug 28, 2023 | Team Udayavani |

ಹೈದರಾಬಾದ್‌: ಆಂಧ್ರಪ್ರದೇಶದ ತಿರುಮಲದಲ್ಲಿ ಕಾಡು ಪ್ರಾಣಿಗಳ ದಾಳಿಗಳ ಪ್ರಕರಣ ಹೆಚ್ಚುತ್ತಿರುವ ನಡುವೆಯೇ, ಸೋಮವಾರ ಚಿರತೆಯೊಂದನ್ನು ಸೆರೆ ಹಿಡಿದು ತಿರುಪತಿ ಮೃಗಾಲಯಕ್ಕೆ ಬಿಡಲಾಗಿದೆ. ಇದು ಈವರೆಗೆ ಸೆರೆ ಸಿಕ್ಕ 4ನೇ ಚಿರತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಆಂಜನೇಯ ಸ್ವಾಮಿ ಪ್ರತಿಮೆ ಬಳಿ ಇರುವ 7ನೇ ಮೈಲಿ ಬಳಿ ಚಿರತೆ ಸೆರೆ ಸಿಕ್ಕಿದೆ. ಆಗಸ್ಟ್‌ 17ರಿಂದಲೂ ಇದನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗುತ್ತಿತ್ತು. ಆದರೆ ಸಿಕ್ಕಿಬಿದ್ದಿರಲಿಲ್ಲ. ಸೋಮವಾರ ಬೆಳಗ್ಗೆ 4 ಗಂಟೆಗೆ ಕೊನೆಗೂ ಚಿರತೆ ಬಲೆಗೆ ಬಿದ್ದಿದೆ ಎನ್ನಲಾಗಿದೆ. ಇನ್ನು ಕೆಲ ದಿನದ ಹಿಂದಷ್ಟೇ ಅಪ್ರಾಪ್ತ ವಯಸ್ಕಳನ್ನು ಕೊಂದಿದ್ದು ಇದೇ ಚಿರತೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಈಗ ಸೆರೆಸಿಕ್ಕ ಚಿರತೆಯೂ ಸೇರಿ ಒಟ್ಟು 4 ಚಿರತೆಗಳನ್ನು ಸೆರೆ ಹಿಡಿಯಲಾಗಿದ್ದು, ಈ ನಾಲ್ಕೂ ಚಿರತೆಗಳೂ ಗಂಡು ಹಾಗೂ ಒಂದೇ ವಯಸ್ಸಿನದ್ದಾಗಿವೆ. ಒಂದೇ ತಾಯಿಯ ಮಕ್ಕಳಿರಬಹುದು ಎಂದೂ ಅರಣ್ಯಾಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next