Advertisement

ನಾಲ್ವರು ತಬ್ಲೀಘಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್‌

12:56 PM May 24, 2020 | mahesh |

ಚಿತ್ರದುರ್ಗ: ಅಹಮದಾಬಾದ್‌ನಿಂದ ಜಿಲ್ಲೆಗೆ ಆಗಮಿಸುತ್ತಲೇ ಕೋವಿಡ್ ಸೋಂಕು ದೃಢಪಟ್ಟಿದ್ದ 6 ಮಂದಿ ತಬ್ಲೀಘಿ ಸದಸ್ಯರ ಪೈಕಿ ಗುಣಮುಖರಾದ ನಾಲ್ವರನ್ನು ಶನಿವಾರ ಆರೋಗ್ಯ ಇಲಾಖೆ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಿತು. ಒಟ್ಟು 6 ರಲ್ಲಿ 4 ಜನರು ಕೋವಿಡ್  19 ಸೋಂಕಿನಿಂದ ಗುಣಮುಖರಾಗಿದ್ದು, ಅವರಿಗೆ ಆಸ್ಪತ್ರೆಯಿಂದ ಮನೆಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ಖುದ್ದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಕೋವಿಡ್‌ ಆಸ್ಪತ್ರೆ ಬಳಿ ಬಂದು ಜಿಲ್ಲಾಸ್ಪತ್ರೆ ಸಿಬ್ಬಂದಿ ಜತೆಗೂಡಿ ಪುಷ್ಪವೃಷ್ಟಿ ಮಾಡಿ ಬೀಳ್ಕೊಟ್ಟರು.

Advertisement

ನಗರದ ವಿವಿಧ ಬಡಾವಣೆಗಳ ನಿವಾಸಿಗಳಾದ 64 ವರ್ಷದ (ಪಿ-751), ಮಧ್ಯ ವಯಸ್ಕ 53 (ಪಿ-752), ಯುವಕರಾದ 34 ವರ್ಷದ (ಪಿ-787), 26 ವರ್ಷದ (ಪಿ-788) ಕೋವಿಡ್‌-19 ಕೊರೊನಾ ಗೆದ್ದು ಬಂದವರು. ಗುಜರಾತಿನ  ಅಹಮದಾಬಾದಿನಿಂದ ಮೇ 5 ರಂದು ಜಿಲ್ಲೆಗೆ ಮರಳಿದ 15 ಜನ ತಬ್ಲೀಘಿಗಳ ಪೈಕಿ ಮೇ 8 ಮತ್ತು 9 ರಂದು ತಲಾ ಮೂವರು ಸೇರಿ ಒಟ್ಟು ಆರು ಜನರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿತ್ತು. ಅದರಲ್ಲಿ ನಾಲ್ವರು ಎರಡು ವಾರಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದಿದ್ದಾರೆ. ಈ ವೇಳೆ ಕೊರೊನಾ ಗೆದ್ದು ಬಂದ ನಾಲ್ವರಲ್ಲೂ ಮಂದಹಾಸ ಮೂಡಿತ್ತು. ಜತೆಗೆ ಆರೋಗ್ಯ ಇಲಾಖೆ ಹಾಗೂ
ಜಿಲ್ಲಾಡಳಿತ ಶುಶ್ರೂಷೆ ಮಾಡಿದ ವೈದ್ಯರು ನರ್ಸ್‌ಗಳು ಸೇರಿದಂತೆ ಎಲ್ಲ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಓರ್ವ ವೃದ್ಧರಂತೂ ನನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ನಮ್ಮನ್ನು ನೋಡಿಕೊಂಡಿದ್ದಾರೆ. ಯಾವಾಗ ಕರೆದರೂ ಬಂದು ಚಿಕಿತ್ಸೆ ನೀಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದರು. ಮತ್ತೋರ್ವ
ಯುವಕ ಮಾತನಾಡಿ, ಕೊರೊನಾ ಸೋಂಕಿನ ಕಾರಣಕ್ಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದೆವು. ಆದರೆ ಇಲ್ಲಿ ನಮಗೆ ಚಿಕಿತ್ಸೆ ನೀಡಿದ ಸಿಬ್ಬಂದಿ ನಮಗೆ ಧೈರ್ಯ ತುಂಬಿದ್ದಾರೆ. ಬೇಗ ಗುಣಮುಖರಾಗುತ್ತಿರಿ ಎಂದು ಹೇಳುವ ಮೂಲಕ ಪ್ರೇರಣೆ ನೀಡಿದ್ದಾರೆ. ಅವರಿಗೆ ನಮಸ್ಕಾರಗಳು ಎಂದರು.

ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರು ನನಗೆ ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ಆಗಿಂದಾಗ್ಗೆ ನರ್ಸ್‌ಗಳು ಬಂದು ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ ಔಷ ಧ ಕೊಟ್ಟು ಹೋಗುತ್ತಿದ್ದರು. ಜತೆಗೆ ಎಲ್ಲರೂ ಧೈರ್ಯ ತುಂಬುತ್ತಿದ್ದರು. ಅವರೆಲ್ಲರ ಶ್ರಮ, ದೇವರ ದಯೆಯಿಂದ ಗುಣಮುಖನಾಗಿ ಹೊರಬಂದಿದ್ದೇನೆ ಎಂದು ಪಿ-751 ತಿಳಿಸಿದರು.

ಗುಜರಾತಿನ ಅಹಮದಾಬಾದಿನಲ್ಲಿ ಇದ್ದಾಗಲೂ ಕೋವಿಡ್‌-19 ದೃಢಪಟ್ಟಿತ್ತು. ಅಲ್ಲಿ 14 ದಿನ ಚಿಕಿತ್ಸೆ ಪಡೆದು ಗುಣವಾದ ನಂತರ ಜಿಲ್ಲೆಗೆ ವಾಪಸ್‌ ಬಂದೆ. ಇಲ್ಲಿ
ಮತ್ತೂಮ್ಮೆ ಸಾಂಸ್ಥಿಕ ಕ್ವಾರಂಟೈನ್‌ ಮಾಡಿದರು. ಇಲ್ಲಿ ಪುನಃ ಪಾಸಿಟಿವ್‌ ಬಂದಾಗ ಗಾಬರಿಯಾಗಿತ್ತು. ಆದರೆ ಮೊದಲೇ ಚಿಕಿತ್ಸೆ ಪಡೆದಿದ್ದರಿಂದ ಭಯಪಡಲಿಲ್ಲ.
ಒಮ್ಮೊಮ್ಮೆ ರಾತ್ರಿ ಎಚ್ಚರವಾದಾಗ ಏನೇನೋ ಆಲೋಚನೆ ಬರುತ್ತಿತ್ತು. ಫೋನ್‌ ಕಿರಿಕಿರಿ ಬೇಡವೆಂದು ಸ್ವಿಚ್‌ ಆಫ್‌ ಮಾಡುತ್ತಿದ್ದೆ. ಈಗ ಗುಣಮುಖನಾಗಿದ್ದು ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸುತ್ತೇನೆ ಎಂದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಡಿಎಚ್‌ಒ ಡಾ| ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರಾಜ್‌, ತಾಲೂಕು ಆರೋಗ್ಯಾಧಿಕಾರಿ ಡಾ| ಗಿರೀಶ್‌, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್‌ ಹಾಗೂ ವೈದ್ಯಕೀಯ ಸಿಬ್ಬಂದಿ ಇದ್ದರು.

Advertisement

ಕೋವಿಡ್ ಪಾಸಿಟಿವ್‌ ಬಂದವರಿಗೆ 7 ಮತ್ತು 12ನೇ  ದಿನ ಪರೀಕ್ಷೆ ಮಾಡಿದಾಗ ನೆಗೆಟಿವ್‌ ವರದಿ ಬಂದಿದೆ. 12ನೇ ದಿನ 24 ಗಂಟೆ ಅವ ಧಿಯಲ್ಲಿ ಎರಡು ಸಲ
ಪರೀಕ್ಷೆ ನಡೆಸಿದ್ದು, ನಾಲ್ಕು ಜನರ ವರದಿ ನೆಗೆಟಿವ್‌ ಬಂದಿದೆ. ಈಗ ಮನೆಯಲ್ಲಿ ಮತ್ತೆ 14 ದಿನಗಳ ಕಾಲ ಕ್ವಾರಂಟೈನ್‌ ಇರಲು ಸೂಚಿಸಿದ್ದೇವೆ.
ಡಾ| ಪಾಲಾಕ್ಷ, ಡಿಎಚ್‌ಒ

Advertisement

Udayavani is now on Telegram. Click here to join our channel and stay updated with the latest news.

Next