Advertisement

ನಕ್ಸಲರ ಗುಂಡಿಗೆ ನಾಲ್ವರು ಯೋಧರ ಬಲಿ

11:29 PM Apr 04, 2019 | Team Udayavani |

ರಾಯಪುರ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಛತ್ತೀಸ್‌ಗಡದ ಕಾನ್ಕರ್‌ ಜಿಲ್ಲೆಯ ಮಹ್ಲಾ ಎಂಬ ಹಳ್ಳಿಯ ಬಳಿ ಗುರುವಾರ ಬಿಎಸ್‌ಎಫ್ ಹಾಗೂ ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ ಸಬ್‌ ಇನ್‌ಸ್ಪೆಕ್ಟರ್‌ ಬೊರೊ, ಪೇದೆಗಳಾದ ರಾಮಕೃಷ್ಣನ್‌, ಸೋಮೇಶ್ವರ್‌ ಹಾಗೂ ಇಶಾರ್‌ ಖಾನ್‌ ಎಂಬ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.

Advertisement

“”ಜಿಲ್ಲಾ ವಿಚಕ್ಷಣ ದಳ ಮತ್ತು ಬಿಎಸ್‌ಎಫ್ನ 114ನೇ ಬೆಟಾಲಿಯನ್‌ ಪಡೆ, ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ, ನಕ್ಸಲರ ಸುಳಿವು ಪತ್ತೆಯಾಗಿತ್ತು. ಅವರು ಅಡಗಿರುವ ಕಡೆಗೆ ಭದ್ರತಾ ಪಡೆಯ ಸಿಬ್ಬಂದಿಯು ಮೆಲ್ಲನೆ ಹೆಜ್ಜೆ ಹಾಕುತ್ತಿದ್ದಾಗ ನಕ್ಸಲರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ, ಪ್ರತಿರೋಧವಾಗಿ ಭದ್ರತಾ ಪಡೆಯೂ ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ನಾಲ್ವರು ಯೋಧರು ಮೃತರಾಗಿದ್ದು ಇಬ್ಬರು ಗಾಯಗೊಂಡಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡಿರುವ ಬಿಎಸ್‌ಎಫ್ನ ಅಸಿಸ್ಟಂಟ್‌ ಕಮಾಂಡಂಟ್‌ ಗೋಪು ರಾಮ್‌ ಮತ್ತು ಇನ್ಸ್‌ಪೆಕ್ಟರ್‌ ಗೋಪಾಲ್‌ ರಾಮ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next