Advertisement

CCB: ಕಾನ್‌ಸ್ಟೇಬಲ್‌ ಹುದ್ದೆ ಪರೀಕ್ಷಾರ್ಥಿಗಳ ಸಂಪರ್ಕಿಸಿದ್ದ ನಾಲ್ವರು ಸಿಸಿಬಿ ವಶಕ್ಕೆ

01:54 PM Sep 11, 2023 | Team Udayavani |

ಬೆಂಗಳೂರು: ಸಶಸ್ತ್ರ ಪೊಲೀಸ್‌ ಕಾನ್‌ಸ್ಟೇಬಲ್‌(ಸಿಎಆರ್‌/ಡಿಎಆರ್‌) ಹುದ್ದೆ ಯ ಪರೀಕ್ಷಾರ್ಥಿಗಳನ್ನು ಸಂಪರ್ಕಿ ಸಿದ್ದ ಆರೋಪದ ಮೇಲೆ ನಾಲ್ವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಬಸವ ರಾಜ್‌, ದಿಲೀಪ್‌, ತಮ್ಮೇಗೌಡ, ಹರಿ ಪ್ರಸಾದ್‌ ಬಂಧಿತರು. ಆರೋಪಿಗಳು 2018ರಲ್ಲಿ ನಡೆದಿದ್ದ ಕಾನ್‌ಸ್ಟೇಬಲ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳಾಗಿದ್ದು, ಬಂಧಿಸಲಾಗಿತ್ತು.

ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದರು. ಈ ಮಧ್ಯೆ ಆರೋಪಿ ಗಳು ಸೆ.10 ರಂದು ನಡೆದ ಸಿಎಆರ್‌/ಡಿಎಆರ್‌ ಕಾನ್‌ಸ್ಟೇಬಲ್‌ಗ‌ಳ ಪರೀಕ್ಷಾರ್ಥಿಗಳನ್ನು ಕೆಲ ದಿನಗಳ ಹಿಂದೆ ಸಂಪರ್ಕಿಸಿದ್ದರು ಎಂಬುದು ಗೊತ್ತಾಗಿದೆ.

ಹೀಗಾಗಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾ ಗಿತ್ತು. ಈ ವೇಳೆಯೂ ಆರೋಪಿಗಳು ಪರೀಕ್ಷಾರ್ಥಿಗಳನ್ನು ಸಂಪರ್ಕಿಸಿರುವುದು ಸಾಬೀತಾಗಿದೆ. ಹೀಗಾಗಿ ಆರೋಪಿಗಳ ವಿರುದ್ಧ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next