Advertisement

BJP ಅನಂತ್ ಕುಮಾರ್ ಹೆಗಡೆ ಸೇರಿ ನಾಲ್ಕೈದು ಸಂಸದರನ್ನು ನಿವೃತ್ತಗೊಳಿಸಬೇಕಿದೆ: ಮುತಾಲಿಕ್‌

12:02 AM Mar 05, 2024 | Team Udayavani |

ಕಾರವಾರ: ಉತ್ತರ ಕನ್ನಡ ಸಂಸದರೂ ಸಹಿತ ನಾಲ್ಕೈದು ಸಂಸದರನ್ನು ಬಿಜೆಪಿ ನಿವೃತ್ತಗೊಳಿ ಸಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲಸ ಮಾಡದ, ಜನರಿಂದ ದೂರವೇ ಇರುವ ಸಂಸದರನ್ನು ಬಿಜೆಪಿ ರಾಜಕೀಯವಾಗಿ ನಿವೃತ್ತಿಗೊಳಿಸಬೇಕು. ಚುನಾವಣೆ ಬಂದಾಗ ಹಿಂದುತ್ವ ಭಾಷಣ ಮಾಡುವವರು ದೇಶಪ್ರೇಮಿಗಳಲ್ಲ. ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವ ಭಾಷಣ ಮಾಡುವುದು ಬೇರೆ. ನಿಜವಾದ ದೇಶಪ್ರೇಮ ಬೇರೆ. ಜನರಿಗೆ ಇದೆಲ್ಲ ಅರ್ಥವಾಗುತ್ತದೆ. ಅಭಿವೃದ್ಧಿ ಮತ್ತು ದೇಶದ ಹಿತದೃಷ್ಟಿಯಿಂದ ನಾಲ್ಕೈದು ಸಂಸದರನ್ನು ಬಿಜೆಪಿ ಬದಲಿ ಸಬೇಕು. ಕೆಲಸ ಮಾಡದೆ, ಜನರಿಗೆ ಸಿಗದೆ ಮೈಗಳ್ಳತನ ಮಾಡಿದವರು ಯಾರು ಎಂದು ಪಕ್ಷಕ್ಕೂ ಗೊತ್ತು. ಜನರಿಗೂ ಗೊತ್ತು. ಸ್ವಾರ್ಥ ರಾಜ ಕೀಯ ಮಾಡುವವರನ್ನು, ಸ್ವಂತ ಅಭಿ ವೃದ್ಧಿಗೆ ಶ್ರಮಿಸುವ ಸಂಸದರನ್ನು ಪಕ್ಷ ಸ್ವಯಂ ನಿವೃತ್ತಿಗೊಳಿಸಬೇಕು. ಪರೇಶ್‌ ಮೇಸ್ತಾ ಹೆಣದ ಮೇಲೆ ರಾಜಕೀಯ ಮಾಡಿದವರು ಅವರ ಕುಟುಂಬಕ್ಕೆ ನ್ಯಾಯ ಕೊಡಿಸಲಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next