Advertisement

ನಾಪತ್ತೆಯಾಗಿದ್ದ ನಾಲ್ವರು ಬಾಲಕರು ಪತ್ತೆ

11:52 AM Jun 11, 2018 | Team Udayavani |

ಆನೇಕಲ್‌: ಅತ್ತಿಬೆಲೆ ಪೋಲಿಸ್‌ ಠಾಣೆ ವ್ಯಾಪ್ತಿಯ ಮಂಚನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಾಪತ್ತೆಯಾಗಿದ್ದ  ನಾಲ್ವರು ಮಕ್ಕಳನ್ನು ಪತ್ತೆಹಚ್ಚಿ ಪೋಷಕರಿಗೆ ಒಪ್ಪಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಚನಹಳ್ಳಿ ಗ್ರಾಮದ ಚಂದನ್‌, ಕಾಸ್‌, ನಂದನ್‌, ಕಾರ್ತಿಕ್‌ ಎಂಬ ಬಾಲಕರು ಶನಿವಾರ  ಸಂಜೆ ಮಂಚನಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಅತ್ತಿಬೆಲೆ ಠಾಣೆಗೆ ದೂರು ನೀಡಿದ್ದರು.

Advertisement

ಪ್ರಕರಣ ದಾಖಲಿಸಿಕೊಂಡ ಅತ್ತಿಬೆಲೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ 2ರ ವೇಳೆ ತುಮಿಳುನಾಡಿನ ಹೊಸೂರಿನಲ್ಲಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಕ್ಕಳ ಪೋಷಕರ ಸಂಬಂಧಿ ತಿಳಿಸಿದ್ದೇನು?: ನಾಪತ್ತೆಯಾಗಿದ್ದ ಬಾಲಕರು ಶನಿವಾರ ಹೊಸೂರು ಬೆಟ್ಟವನ್ನು ನೋಡಿಕೊಂಡು ನಂತರ ಸಿನಿಮಾ ನೋಡಿ ಹೊರ ಬರುವಷ್ಟರಲ್ಲಿ ಸುಮಾರು 11 ಗಂಟೆಯಾಗಿತ್ತು. ರಾತ್ರಿ ವೇಳೆ ಮನೆಗೆ ಬರಲು ದಾರಿ ಕಾಣದೆ  ಹೊಸೂರು ಬಸ್‌ ನಿಲ್ದಾಣದ ಸಮೀಪದ ಸೇತುವೆ ಮೇಲೆ ಉಳಿದುಕೊಂಡಿದ್ದರು.

ಮಕ್ಕಳನ್ನು ಕಂಡ ತಮಿಳುನಾಡಿನ ಪೊಲೀಸರು ವಿಚಾರಿಸಿ ಪೋಷಕರಿಗೆ ಕರೆ ಮಾಡಿದರು. ನಂತರ ರಾತ್ರಿ 2ರ ವೇಳೆ ಮಕ್ಕಳನ್ನು ಊರಿಗೆ ಕರೆದು ಕೊಂಡು ಬರಲಾಗಿದೆ ಎಂದು ನಾಪತ್ತೆಯಾಗಿದ್ದ ಮಕ್ಕಳ ಪೋಷಕರ ಸಂಬಂಧಿ “ಉದಯವಾಣಿ’ಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next