Advertisement

ಒಡಿಶಾದಲ್ಲಿ ಸಿಡಿಲು ಬಡಿದು ನಾಲ್ವರ ಸಾವು; ಆರು ಮಂದಿಗೆ ಗಾಯ

05:23 PM Jul 07, 2017 | udayavani editorial |

ಭುವನೇಶ್ವರ : ಒಡಿಶಾದ ಮಯೂರ್‌ಭಂಜ್‌ ಜಿಲ್ಲೆಯಲ್ಲಿ  ಸಿಡಿಲು ಬಡಿದು ಮೂವರು ಮಹಿಳೆಯರ ಸಹಿತ ನಾಲ್ಕು ಮಂದಿ ಮೃತಪಟ್ಟರೆ, ಮೂರು ಮಕ್ಕಳ ಸಹಿತ ಇತರ ಆರು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ. 

Advertisement

ಬಾರಿಪಾಡ ಸದರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ತಿಕಾರಿಪಾಡ ಗ್ರಾಮದಲ್ಲಿ ಭತ್ತದ ಗದ್ದೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಹೊಡೆದ ಸಿಡಿಲಿಗೆ ಮೂವರು ಮಹಿಳೆಯರು ಬಲಿಯಾದರು. 

ಇನ್ನೊಂದು ಪ್ರಕರಣದಲ್ಲಿ ರಘುನಾಥಗಂಜ್‌ ಗ್ರಾಮದಲ್ಲಿ ಹೊಲದಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷಿ ಕಾರ್ಮಿಕನೋವರ ಸಿಡಿಲಿನ ಹೊಡೆತಕ್ಕೆ ಬಲಿಯಾದ. 

ಟಿಕಾಪಾಡ ಗ್ರಾಮದಲ್ಲಿನ ಆಂಗನವಾಡಿ ಕಟ್ಟಡಕ್ಕೆ ಸಿಡಿಲು ಹೊಡೆದ ಪ್ರಯುಕ್ತ ಮೂವರು ಮಕ್ಕಳ ಸಹಿತ ಆರು ಮಂದಿ ಗಾಯಗೊಂಡರು. ಇವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next