Advertisement

ಸುನೇಹಾಗೆ ನಾಲ್ಕು ಸ್ವ ರ್ಣ ಪದಕ

09:33 PM Jan 03, 2022 | Team Udayavani |

ದಾವಣಗೆರೆ: ಹೈದರಾಬಾದ್‌ನಲ್ಲಿರುವ ಪ್ರತಿಷ್ಠಿತ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಎನ್‌.ಎ.ಎಲ್‌.ಎಸ್‌.ಎ. ಆರ್‌( ನ್ಯಾಷನಲ್‌ ಅಕಾಡೆಮಿ ಆಫ್‌ ಲೀಗಲ್‌ ಸ್ಟಡೀಸ್‌ ಅಂಡ್‌ ರಿಸರ್ಚ್‌) ಕೋರ್ಸ್‌ನ ಅಂತಿಮ ಪರೀಕ್ಷೆಯಲ್ಲಿ ದಾವಣಗೆರೆಯ ಸುನೇಹಾ ಕಾಸಲ್‌ ನಾಲ್ಕು ಸ್ವರ್ಣ ಪದಕ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

Advertisement

ದಾವಣಗೆರೆಯ ಕಾಸಲ್‌ ಅರುಣ್‌ಕುಮಾರ್‌ ಮತ್ತು ಪದ್ಮಾ ಅರುಣ್‌ಕುಮಾರ್‌ರವರ ದ್ವಿತೀಯ ಪುತ್ರಿ ಸುನೇಹಾ ಕಾಸಲ್‌ ದಾವಣಗೆರೆಯ ದವಿಪೂರ್ವ ಶಿಕ್ಷಣ ಪಡೆದಿದ್ದರು. ರಾಷ್ಟ್ರ ಮಟ್ಟದ ಸ್ಪರ್ಧಾ ಪರೀಕ್ಷೆ ಕ್ಯಾಟ್‌ನಲ್ಲಿ ಅತ್ಯುñಮ ‌¤ ಸಾಧನೆಯೊಂದಿಗೆ ಕಾನೂನು ವಿಶ್ವ ವಿದ್ಯಾನಿಲಯದಲ್ಲಿಪ್ರವೇಶಪಡೆದಿದ್ದರು

. ಅಂತಾರಾಷ್ಟ್ರೀಯ ಮಾನ್ಯತೆ ಇರುವ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆಯುವುದೇ ಒಂದು ಸಾಧನೆ ಎಂದು ಪರಿಗಣಿಸಲಾಗುತ್ತದೆ. ಅಂತಿಮಪರೀಕ್ಷೆಯಲ್ಲಿನಾಲ್ಕುಸ್ವರ್ಣ ಪದಕ ಪಡೆಯುವ ಗಮನಾರ್ಹ ಸಾಧನೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇ.ವಿ. ರಮಣ ಅವರು ಸ್ವರ್ಣ  ಪದಕ ಪ್ರದಾನ ಮಾಡಿದರು

 

Advertisement

Udayavani is now on Telegram. Click here to join our channel and stay updated with the latest news.

Next