Advertisement

ನಾಲ್ವರು ದರೋಡೆಕೋರರ ಸೆರೆ

06:33 PM Mar 06, 2021 | Team Udayavani |

ಬೀರೂರು: ಮಾರಕಾಸ್ತ್ರಗಳಿಂದ ಬೆದರಿಸಿ ಖಾರದ ಪುಡಿ ಎರಚಿ ವಾಹನ ಸವಾರರ ಮೇಲೆ ಹಲ್ಲೆ ನಡೆಸಿ ಅವರ ಬಳಿ ಇರುವ ಹಣ ಮತ್ತು ಚಿನ್ನಾಭರಣಗಳನ್ನು ದರೋಡೆ ಮಾಡುತ್ತಿದ್ದ ನಾಲ್ವರು ದರೋಡೆಕೋರರನ್ನು ಬೀರೂರು- ಕಡೂರು ಮಧ್ಯೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಂಧಿಸುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಹೊಸದುರ್ಗ ತಾಲೂಕಿನ ದಾಸೇನಹಳ್ಳಿ ಗ್ರಾಮದ ಮಣಿಕಂಠ, ಮಲ್ಲಿಕಾರ್ಜುನ, ಸುರೇಶ ಮತ್ತು ಗೌತಮ್‌ ಬಂ ತ ಆರೋಪಿಗಳು ಎಂದು ಗುರುತಿಸಲಾಗಿದೆ. ಬಂ ಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು, ಮೂರು ದ್ವಿಚಕ್ರ ವಾಹನ, ಚಿನ್ನದ ಬಳೆ, 4 ಮೊಬೈಲ್‌ ಹಾಗೂ 6070 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕಡೂರು ಮತ್ತು ಬೀರೂರು ಠಾಣೆಯಲ್ಲಿ ತಲಾ ಒಂದೊಂದು ಮತ್ತು ಹಿರಿಯೂರು ಠಾಣೆಯಲ್ಲಿ ಬೈಕ್‌ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.

ಜಿಲ್ಲಾ ಪೊಲೀಸ್‌ ಅಧಿಧೀಕ್ಷಕ ಅಕ್ಷಯ್‌ ಮಾರ್ಗದರ್ಶನದಂತೆ, ತರೀಕೆರೆ ಡಿವೈಎಸ್‌ಪಿ ಏಗನಗೌಡರ್‌, ಬೀರೂರು ವೃತ್ತ ನಿರೀಕ್ಷಕ ಶಿವಕುಮಾರ್‌ ಸೂಚನೆಯಂತೆ, ಪಿಎಸ್‌ಐ ಕೆ.ವಿ. ರಾಜಶೇಖರ್‌ ಮತ್ತು ಅಪರಾಧ ವಿಭಾಗದ ಪಿಎಸ್‌ಐ ಎಚ್‌. ಬಸವರಾಜಪ್ಪ, ಪ್ರೊಬೆಷನರಿ ಪಿಎಸ್‌ಐ ಶಶಿಕುಮಾರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ತಮ್ಮ ಸಿಬ್ಬಂದಿಯೊಂದಿಗೆ ತಡರಾತ್ರಿ ಗಸ್ತು ವಾಹನದೊಂದಿಗೆ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದಾಗ ಆರೋಪಿಗಳನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next