Advertisement

ದಾವಣಗೆರೆ: ಕೋವಿಡ್ 19 ಸೋಂಕಿಗೆ ನಾಲ್ವರು ಬಲಿ

12:11 AM Jul 12, 2020 | Hari Prasad |

ದಾವಣಗೆರೆ: ಕೋವಿಡ್ 19 ಮಹಾಮಾರಿ ಜಿಲ್ಲೆಯಲ್ಲಿ ಇಂದು ಒಂದೇ ದಿನ ನಾಲ್ವರನ್ನು ಬಲಿ ಪಡೆದುಕೊಂಡಿದೆ.

Advertisement

ಇದೇ ಮೊದಲ ಬಾರಿಗೆ ಚಿಕ್ಕ ಮಕ್ಕಳು ಒಳಗೊಂಡಂತೆ 70 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.

ಶನಿವಾರ ನಾಲ್ವರ ಸಾವಿನಿಂದ ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಈ ನಡುವೆ ಜಿಲ್ಲೆಯಲ್ಲಿ ಇಂದು ಐವರು ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.‌ ಜಿಲ್ಲೆಯಲ್ಲಿ ಒಟ್ಟಾರೆ 514 ಪ್ರಕರಣಗಳಲ್ಲಿ ಈವರೆಗೆ 344 ಜನರು ಬಿಡುಗಡೆ ಆಗಿದ್ದಾರೆ. 152 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next