Advertisement

ಮಾಸಾಶನಕ್ಕಾಗಿ ಮಣ್ಣು ತಿಂದು ಪ್ರತಿಭಟಿಸಿದ ಮಾಜಿ ಕುಸ್ತಿ ಪಟುಗಳು

02:51 PM Jun 06, 2022 | Team Udayavani |

ಗದಗ: ಮಾಸಾಶನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಮಾಜಿ ಕುಸ್ತಿ ಪಟುಗಳು ಮಣ್ಣು ತಿನ್ನುವ ಮೂಲಕ ಜಿಲ್ಲಾಡಳಿತ ಭವನದ ಎದುರು ಸೋಮವಾರ ವಿನೂತನ ಪ್ರತಿಭಟನೆ ನಡೆಸಿದರು.

Advertisement

ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘದ ನೇತೃತ್ವದಲ್ಲಿ ಮಾಜಿ ಕುಸ್ತಿ ಹಾಗೂ ಕಬಡ್ಡಿ ಪಟುಗಳು ಪ್ರತಿಭಟನೆ ನಡೆಸಿದರಲ್ಲದೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಮಾಜಿ ಕುಸ್ತಿಪಟುಗಳಿದ್ದು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ತಿಂಗಳು ದೊರೆಯುತ್ತಿದ್ದ ಮಾಸಾಶನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಕಾರಣ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಜಿಲ್ಲೆಯಲ್ಲಿ ಕೆಲ ವಯೋವೃದ್ಧ ಮಾಜಿ ಕುಸ್ತಿಪಟುಗಳ ಆರೋಗ್ಯ ಹದಗೆಟ್ಟಿದ್ದು, ಔಷಧೋಪಚಾರ ಪಡೆಯಲು ಪರದಾಡುವಂತಾಗಿದೆ. ಜಿಲ್ಲಾಡಳಿತ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕೂಡಲೇ ಮಾಸಾಶನ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕುಸ್ತಿ ಪೈಲ್ವಾನ್ ಸಂಘದ ಅಧ್ಯಕ್ಷ ದೇವಪ್ಪ ಗುಡೇದ, ಪದಾಧಿಕಾರಿಗಳಾದ ಸುಭಾಷ್ ಕಟಗೇರಿ, ಮೋದಿನಸಾಬ್ ಅಣ್ಣಿಗೇರಿ, ದೇವಪ್ ಯಲಿಗಾರ, ಅಮರಪ್ಪ ಗುಡಗುಂಟಿ ಸೇರಿ ಮಾಸಿ ಕುಸ್ತಿ ಹಾಗೂ ಕಬಡ್ಡಿ ಪಟುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next