Advertisement

Chikodi: ವಿದ್ಯುತ್ ಕಣ್ಣಾಮುಚ್ಚಾಲೆ, ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ

12:42 PM Aug 23, 2023 | Team Udayavani |

ಚಿಕ್ಕೋಡಿ: ನಾಗರಮುನ್ನೋಳ್ಳಿ 220 ಎಂವಿಎ ಮತ್ತು 110 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಬೃಹತ್ ಪ್ರತಿಭಟನೆ ನಡೆಸಿದರು.

Advertisement

ನಾಗರಮುನ್ನೋಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಮಂಗಳವಾರ ರಾತ್ರಿಯಿಂದ ವಿದ್ಯುತ್ ಕಡಿತಗೊಂಡಿದೆ. ಇದರಿಂದ ಆಕ್ರೋಶಗೊಂಡ ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ರಾಜ್ಯ ಸರಕಾರದ ವಿರುದ್ದ ಹರಿಹಾಯ್ದರು.

ನಾಗರಮುನ್ನೋಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಉಮರಾಣಿ. ಬೆಳಕೂಡ. ನಾಗರಮುನ್ನೋಳ್ಳಿ. ಜೋಡಕುರಳಿ. ‌ಬೆಳಗಲಿ ಸುಮಾರು 500 ಅಧಿಕ ರೈತರು ಹೆಸ್ಕಾಂ ಕಚೇರಿಗೆ ಬೀಗ ಜಡಿದು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.
ಚಿಕ್ಕೋಡಿ ತಾಲೂಕಿನ ಬೆಳಗಲಿ ಗ್ರಾಮದ ಹದ್ದಿಯಲ್ಲಿ ಕಳೆದ 20 ದಿನಗಳಿಂದ ವಿದ್ಯುತ್ ಪೂರೈಕೆ ಮಾಡಿಲ್ಲ. ತೋಟಪಟ್ಟಿ ಪ್ರದೇಶದ ರೈತರು ವಿದ್ಯುತ್ ಇಲ್ಲದೇ ಕಂಗಾಲಾಗಿದ್ದಾರೆ. ಇದರಿಂದ ಆಕ್ರೊಶಗೊಂಡ ಬೆಳಗಲಿ ರೈತರು ಮಂಗಳವಾರ ಸಂಜೆ ನಾಗರಮುನ್ನೋಳ್ಳಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ಬೀಗ ಜಡಿದು ಹೋಗಿದ್ದಾರೆ. ಬುಧವಾರ ಬೆಳಗಿನ ಜಾವ ಜೋಡಕುರಳಿ. ನಾಗರಮುನ್ನೋಳ್ಳಿ ಸೇರಿದಂತೆ ವಿವಿಧ ಗ್ರಾಮದ ರೈತರು ವಿದ್ಯುತ್ ವಿತರಣಾ ಕೇದ್ರಕ್ಕೆ ಆಗಮೀಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಿಜಾಮ ಪೆಂಡಾರಿ.ಶಿವಗೌಡ ಕೊಟೆಪ್ಪಗೋಳ. ಬಾಬಲಾಲ ನುಲ್ತಾನಿ. ಭೀಮಪ್ಪ ಕಗ್ಗನ್ನವರ. ಮಲ್ಳಿಕಾರ್ಜುನ ಆಲೂರೆ. ಲಕ್ಷ್ಮಣ ಹುದ್ದಾರ. ಭೀಮಪ್ಪ ಕಿವಡ. ಜೋಡಕುರಳಿ ಬಸಗೌಡ ಪಾಟೀಲ. ಕಲ್ಲಪ್ಪ ಪಾಶ್ಚಾಪೂರೆ ಮುಂತಾದವರು ಇದ್ದರು.

ಇದನ್ನೂ ಓದಿ: Gangavati: ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಶ್ರೀರಂಗದೇವರಾಯರ ಅಂತ್ಯಕ್ರಿಯೆಗೆ ಸೂಚನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next