Advertisement

ನೇತ್ರದಾನದ ಮೂಲಕ ಅಂಧರ ಬಾಳಿಗೆ ಕಣ್ಣಾದ ಮಾಜಿ ಶಾಸಕ ಉರಿಮಜಲು ರಾಮ ಭಟ್

10:46 AM Dec 07, 2021 | Team Udayavani |

ಪುತ್ತೂರು: ಕರಾವಳಿಯ ವಾಜಪೇಯಿ ಎಂದೇ ಹೆಸರುವಾಸಿಯಾಗಿದ್ದ ತತ್ತ್ವಾಧಾರಿತ  ರಾಜಕಾರಣಿ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದ ಹಿರಿಯ ನೇತಾರ, ಮಾಜಿ ಶಾಸಕ ಉರಿಮಜಲು ರಾಮ ಭಟ್‌ (92) ಕೊಂಬೆಟ್ಟು ನಿವಾಸದಲ್ಲಿ ಡಿ. 6ರಂದು ನಿಧನ ಹೊಂದಿದ್ದಾರೆ.

Advertisement

ಇದೀಗ ರಾಮ್ ಭಟ್   ನೇತ್ರದಾನದ ಮೂಲಕ ಇತರರ ಬಾಳಲ್ಲಿ ಬೆಳಕು ಹರಿಸಿ ಈ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ನೇತ್ರದಾನ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.

ರಾಮ್ ಭಟ್ ಅವರ ನಿಧನ ವಾರ್ತೆ ತಿಳಿದ ಬಳಿಕ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ ಪರವಾಗಿ ವೈದ್ಯರು ರಾಮ್ ಭಟ್ ಅವರ ಕಣ್ಣು ತೆಗೆದು ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next