Advertisement

Raghupathi Bhat: ಹಿಜಾಬ್‌ ನಿಷೇಧ ಧರ್ಮಾಧಾರಿತ ಅಲ್ಲ, ಸಮವಸ್ತ್ರ ಆಧಾರಿತ: ಭಟ್‌‌

08:31 AM May 31, 2024 | Team Udayavani |

ಕುಂದಾಪುರ: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ ಧಾರಣೆ ನಿಷೇಧ ಮಾಡಿದ್ದು ಧರ್ಮಾಧಾರಿತವಾಗಿ ಅಲ್ಲ. ಸಮವಸ್ತ್ರ ಆಧಾರಿತವಾಗಿ. ಒಂದೂವರೆ ವರ್ಷ ಹಿಜಾಬ್‌ ಬದಿಗಿಟ್ಟು ಸಮವಸ್ತ್ರದಲ್ಲಿ ಆಗಮಿಸುತ್ತಿದ್ದ ಆಕೆ ಕಾಲೇಜಿನ ಶಿಸ್ತು ತಪ್ಪಿಸಿ ಸಂಘಟನೆಯ ಕುಮ್ಮಕ್ಕಿನಿಂದ ಕೊನೆಯ ಎರಡು ತಿಂಗಳು ಹಿಜಾಬ್‌ ಧರಿಸಿದ್ದರಿಂದ ಹೀಗೆಲ್ಲಾ ಆಯಿತು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಗುರುವಾರ ಸುದ್ದಿಗಾರರ ಜತೆ ಮಾತನಾಡಿ, ಹಿಜಾಬ್‌ ಪರ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಸಾಮಾಜಿಕ ಜಾಲತಾಣದಲ್ಲಿ ರಘುಪತಿ ಭಟ್‌ ಬಿಜೆಪಿಯಿಂದ ಉಚ್ಚಾಟನೆಗೊಂಡ ಕುರಿತು ಹಾಕಿದ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಆಕೆ ಒಳ್ಳೆ ವಿದ್ಯೆ ಕಲಿಯಲಿ. ಆಗ ಧರ್ಮಾಂಧತೆ ಬರುವುದಿಲ್ಲ. ದೇಶದ್ರೋಹದ ಚಿಂತನೆ ಬರುವುದಿಲ್ಲ ಎಂದಿದ್ದಾರೆ. ನೈಋತ್ಯ ಪದವೀಧರ ಕ್ಷೇತ್ರದಲ್ಲಿ 4 ಪ್ರಬಲ ಅಭ್ಯರ್ಥಿಗಳಿದ್ದು ವ್ಯಕ್ತಿಗಳ ಸಾಧನೆ ಆಧರಿಸಿ ನನಗೆ ಸುಶಿಕ್ಷಿತ ಜನ ಮತ ನೀಡಲಿದ್ದಾರೆ. ಈ ಮೊದಲು ಸಾರ್ವಜನಿಕ ಕೆಲಸಗಳಾದ ಕಾರಣ ಇನ್ನು ಮುಂದೆಯೂ ನನ್ನಿಂದ ಜನಸೇವೆ ಆಗಲಿದೆ ಎಂದು ನಂಬಿಕೆ ಇರಲಿದೆ. ನಾನು ಟೆಸ್ಟೆಡ್‌ ಗೂಡ್ಸ್‌. ನನ್ನದು ಹಿಂದೂ ಸಿದ್ಧಾಂತ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next