Advertisement

ರಾಜಕಾರಣಕ್ಕೆ ಬರಲ್ಲ: ಮಾಜಿ ಸಚಿವ ಜನಾರ್ದನ ರೆಡ್ಡಿ

10:47 PM Feb 06, 2022 | Team Udayavani |

ಬಳ್ಳಾರಿ: ಸಾಮಾನ್ಯ ವ್ಯಕ್ತಿಯಂತೆ ಬದುಕಬೇಕೆಂದಿದ್ದೇನೆ, ಪದೇಪದೆ ನನಗೆ ರಾಜಕೀಯಕ್ಕೆ ಗಂಟು ಹಾಕಬೇಡಿ ಎಂದು ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ.

Advertisement

ನಗರದಲ್ಲಿ ರವಿವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹತ್ತು ವರ್ಷ ಬಳ್ಳಾರಿ ಯಿಂದ ದೂರ ಇದ್ದು, ನರಕ ಯಾತನೆ ಅನುಭವಿಸಿದ್ದೇನೆ. ಅದನ್ನು ಮೊದಲು ಮರೆಯಬೇಕಾಗಿದೆ ಎಂದರು.

ಕೆಲ ದಿನಗಳ ಹಿಂದೆ ಗಂಗಾವತಿಯಲ್ಲಿ ಜನಾರ್ಧನ ರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಮುಂಬರುವ   2023 ರ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷದ ಮುಖಂಡರು ಕಾರ್ಯಕರ್ತರು ಹೆಚ್ಚಾಗಿ ಆತ್ಮೀಯ ಗೆಳೆಯ ಸಚಿವ ಬಿ.ಶ್ರೀರಾಮುಲು ಹೇಳಿದರೆ ಸ್ಪರ್ಧೆ ಮಾಡುವುದಾಗಿ ಸುಳಿವು ನೀಡಿದ್ದರು ಆದರೆ ಈಗ ರಾಜಕಾರಣಕ್ಕೆ ಬರಲ್ಲ ಎಂದು ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next