Advertisement

ಹೆಚ್ ವೈ ಮೇಟಿ ಪ್ರಕರಣದ ಸಂತ್ರಸ್ತ ಮಹಿಳೆಯ ಕೊಲೆಯತ್ನ

12:56 PM Aug 12, 2019 | sudhir |

ಬಾಗಲಕೋಟೆ : ಮಾಜಿ‌‌ ಸಚಿವ ಹೆಚ್ ವೈ ಮೇಟಿ ಪ್ರಕರಣದ ಸಂತ್ರಸ್ತ ಮಹಿಳೆ ವಿಜಯಲಕ್ಷ್ಮಿ ಸರೂರ(30) ಕೊಲೆಯತ್ನ ನಡೆದಿದೆ ಎನ್ನಲಾಗಿದೆ.

Advertisement

ಸಂತ್ರಸ್ತ ಮಹಿಳೆಯ ಮನೆಗೆ ನುಗ್ಗಿದ ಅಪರಿಚಿತರ ತಂಡ ಮಹಿಳೆಯ ಮುಖ ಹಾಗೂ ಕೈಗೆ ಚಾಕುವಿನಿಂದ ಇರಿದು ಹಲ್ಲೆಗೈದಿದ್ದಾರೆ.

ಮಹಿಳೆಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯಪುರದ ರೇಷ್ಮಾ ಪಡೆಕನೂರ ಅವರ ರೀತಿಯಲ್ಲೇ ನನ್ನನ್ನು ಕೊಲೆ ಮಾಡುತ್ತಾರೆ ನನಗೆ ಜೀವ ಭಯವಿದೆ ರಕ್ಷಣೆ ಬೇಕೆಂದು ಬಾಗಲಕೋಟೆ ನವನಗರ ಠಾಣೆಯ ಪೊಲೀಸರಲ್ಲಿ ಮನವಿಮಾಡಿದ್ದಾರೆ.

ಮಾಜಿ ಸಚಿವ ಮೇಟಿ ವಿರುದ್ಧ ಸಂತ್ರಸ್ತ ಮಹಿಳೆ ಸುಪಾರಿ ಆರೋಪದ ಮೇಲೆ ಠಾಣೆಯಲ್ಲಿ ಪ್ರಕರಣ ದಾಖಲುಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next